ಗರುಡ ಪುರಾಣದ ಕೆಲವು ನೀತಿವಚನಗಳು !
ಕಷ್ಟಕಾಲದಲ್ಲಿ ಚಿರಪರಿಚಿತರೂ ಕೂಡ ಮೆಲ್ಲಮೆಲ್ಲಗೆ ಹೇಗೆ ಜಾರಿಕೊಳ್ಳುತ್ತಾರೆಂದರೆ.
ಪಕ್ಷಿಗಳು ಹಣ್ಣುಗಳಿಲ್ಲದ ಮರವನ್ನು ಬಿಟ್ಟುಹೋಗುತ್ತವೆೆ. ನೀರು ಬತ್ತಿದ ಕೊಳದಲ್ಲಿ ಕಮಲಗಳಿರುವುದಿಲ್ಲ.
ಹೂವು ಬಾಡಿದರೆ ದುಂಬಿಗಳು ಅಲ್ಲಿಗೆ ಬರುವುದಿಲ್ಲ. ಸುಟ್ಟುಹೋದ ಅಡವಿಯಲ್ಲಿ ಪ್ರಾಣಿಗಳು ಉಳಿಯಲಾರವು. ಅಂತೆಯೇ ಕಷ್ಟಕಾಲದಲ್ಲಿ ಚಿರಪರಿಚಿತರೂ ದೂರವಾಗುತ್ತಾರೆ.
ಆದರೆ ಈ ಎಲ್ಲವೂ ಪುನಃ ಒಮ್ಮೆ ತಮ್ಮ ಮೊದಲಿನ ಸ್ವರೂಪವನ್ನು ಪಡೆದುಕೊಂಡರೆ ಎಲ್ಲರೂ, ಎಲ್ಲವೂ ಪುನಃ ಬಂದು ಆಶ್ರಯಿಸುತ್ತವೆ. ಸ್ವಾರ್ಥದ ಸ್ವಭಾವಸ್ವರೂಪವು ಹೇಗಿರುತ್ತದೆ ಎಂಬುದನ್ನು ಈ ನೀತಿಯಿಂದ ತಿಳಿಯಬಹುದು.
ವಿನಾಕಾರಣ ಅನ್ಯರ ಮನೆಯಲ್ಲಿ ವಾಸ ಮಾಡಬಾರದು.
ಮೂರ್ಖ ಶಿಷ್ಯನಿಗೆ ಪಾಠ ಹೇಳುವುದರಿಂದಲೂ, ಕೆಟ್ಟ ಸ್ವಭಾವದ ಹೆಂಡತಿಯನ್ನು ಪಡೆಯುವುದರಿಂದಲೂ, ಮಹಾಮೇಧಾವಿಯೂ ಗೌರವವನ್ನು ಕಳೆದುಕೊಳ್ಳುತ್ತಾನೆ.
ಶತ್ರುಗಳಾದರೂ ನಮ್ಮ ಹಿತವನ್ನು ಬಯಸುವುದಾದರೆ ಅವರೇ ನಿಜವಾದ ಬಂಧುಗಳು. ನೆಂಟನಾದವನು ನಮ್ಮ ವಿನಾಶವನ್ನು ಬಯಸುತ್ತಿದ್ದರೆ ಅವನೇ ನಿಜವಾದ ಶತ್ರು.
ನಮ್ಮಲ್ಲಿ ಉಂಟಾದ ರೋಗ ನಮಗೆ ಶತ್ರು. ದೂರದ ಅಡವಿಯಲ್ಲಿದ್ದ ಔಷಧವು ನಮಗೆ ಮಿತ್ರ.
ಯಾವ ಪ್ರದೇಶದಲ್ಲಿ ನಮಗೆ ಗೌರವ, ಆದರ ಮತ್ತು ಬಂಧುಗಳಿರುವುದಿಲ್ಲವೋ ಮತ್ತು ವಿದ್ಯೆಯನ್ನು ಸಂಪಾದಿಸುವ ಅವಕಾಶವಿರುವುದಿಲ್ಲವೋ ಆ ಪ್ರದೇಶವನ್ನು ಬಿಡುವುದೇ ಲೇಸು.
ಉತ್ತಮ ಅಧ್ಯಯನವನ್ನು ಮಾಡಬೇಕೆಂಬುವವನು ನಿದ್ರೆ ಆಹಾರಗಳನ್ನು ಕುರಿತು ಚಿಂತಿಸಬಾರದು.
ಗರುಡನು ಎಷ್ಟೂ ದೂರವಾದರೂ ಹೋಗಿ ತನ್ನ ಗುರಿಯನ್ನು ಸಾಧಿಸುತ್ತಾನಷ್ಟೆ!
ನೂರಾರು ಗೋವುಗಳಿದ್ದರೂ ಕರುವು ಅದರಲ್ಲಿ ತನ್ನ ತಾಯಿಯನ್ನು ಗುರುತಿಸಿ ಹೇಗೆ ತನ್ನ ತಾಯಿಯನ್ನೇ ಸೇರಿಕೊಳ್ಳುತ್ತದೆಯೋ, ಹಾಗೆ ಮಾಡಿದ ಪುಣ್ಯ-ಪಾಪಗಳು ಆ ಕರ್ತನನ್ನೇ ಅನುಸರಿಸುತ್ತವೆ.
ರೋಗಗಳು ಯಾರಿಗಾದರೂ ಬರಬಹುದು, ಸಂಪತ್ತು ಯಾರನ್ನಾದರೂ ಬಿಡಬಹುದು.
ಜಿಪುಣನ ಕೈಯಲ್ಲಿನ ಹಣ, ಒರಟನ ಹತ್ತಿರದ ಜ್ಞಾನ, ಪರಾಕ್ರಮವಿಲ್ಲದ ಅಂದಚೆಂದಗಳು, ಕಷ್ಟಕಾಲದಲ್ಲಿ ಸಹಾಯಕ್ಕೆ ಬಾರದ ಮೈತ್ರಿ ವ್ಯರ್ಥ.
ಕೆಟ್ಟವರ ಸಹವಾಸ ಮಾಡಿದರೆ ಇಹವೂ ಇಲ್ಲ ಪರವೂ ಇಲ್ಲ ಆದ್ದರಿಂದ ಉತ್ತಮರ ಸಹವಾಸವನ್ನೇ ಮಾಡಬೇಕು.
ಸಂಗ್ರಹಿಸಿದ್ದು
ಅಸಂಖ್ಯಾತ ನೀತಿಗಳಿಂದ ತುಂಬಿದ ಗರುಡಪುರಾಣವು ಅದ್ಭುತ ಗ್ರಂಥವಾಗಿದೆ.
ಈ ಜಾಲತಾಣದ ವಿಷಯಗಳು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಸಹಾಯಕವಾಗಿವೆ. ನೀತಿ ಕಥೆಗಳು ಮತ್ತು ವಾಸ್ತವ ಜೀವನದ ಹೋಲಿಕೆಗಳು ಚಿಂತನೆಗೆ ಆಹ್ವಾನಿಸುತ್ತವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವುದು ಈ ಜಾಲತಾಣದ ಒಂದು ವಿಶೇಷತೆ. ದೇವಸ್ಥಾನಗಳಲ್ಲಿ ಅನ್ನಪ್ರಸಾದದ ಮಹತ್ವವನ್ನು ಜನರಿಗೆ ತಿಳಿಸುವುದು ಒಳ್ಳೆಯ ಪ್ರಯತ್ನ. ಈ ನೀತಿ ಕಥೆಗಳು ನಮ್ಮ ದೈನಂದಿನ ಜೀವನಕ್ಕೆ ಹೇಗೆ ಸಂಬಂಧಿಸಿವೆ?
ಈ ಲೇಖನವು ನಮ್ಮ ಸಂಸ್ಕೃತಿ, ಪುರಾಣಗಳು ಮತ್ತು ಧಾರ್ಮಿಕ ಕಥೆಗಳ ಬಗ್ಗೆ ಅದ್ಭುತವಾದ ಮಾಹಿತಿಯನ್ನು ಒದಗಿಸುತ್ತದೆ. ಕನ್ನಡ ಸಾಹಿತ್ಯ ಮತ್ತು ನಮ್ಮ ಪೂರ್ವಜರ ನೀತಿಗಳು ಯಾವಾಗಲೂ ಪ್ರೇರಣೆ ನೀಡುವುದು ನಿಜ. ಈ ಲೇಖನದಲ್ಲಿ ಉಲ್ಲೇಖಿಸಿದ ಪುಣ್ಯ ಸ್ಥಳಗಳನ್ನು ನಾನು ಭೇಟಿ ಮಾಡಲು ಬಯಸುತ್ತೇನೆ. ನಮ್ಮ ದೇವಸ್ಥಾನಗಳಲ್ಲಿ ಅನ್ನಪ್ರಸಾದದ ಮಹತ್ವವನ್ನು ಅರಿತುಕೊಂಡು, ಅದನ್ನು ಗೌರವಿಸುವುದು ಅತ್ಯಂತ ಮುಖ್ಯ. ‘ಗಡ್ಬಡ್’ನಂತಹ ಸ್ವಾದಿಷ್ಟ ತಿಂಡಿಗಳು ನಮ್ಮ ಪರಂಪರೆಯ ಭಾಗವಾಗಿದೆ ಎಂಬುದನ್ನು ಅರಿತುಕೊಳ್ಳಲು ಖುಷಿ ಆಯಿತು. ‘ಗರುಡಪುರಾಣ’ದಂತಹ ಗ್ರಂಥಗಳನ್ನು ಓದುವುದರ ಮೂಲಕ ನಾವು ನಮ್ಮ ನೈತಿಕ ಜ್ಞಾನವನ್ನು ಹೆಚ್ಚಿಸಬಹುದು ಎಂದು ನಾನು ನಂಬುತ್ತೇನೆ. ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ನೀವು ಹೆಚ್ಚಾಗಿ ಹಂಚಲು ಯೋಚಿಸುತ್ತಿರುವಿರಾ? ನಿಮ್ಮ ಲೇಖನಗಳನ್ನು ನಾನು ಓದಲು ಬಯಸುತ್ತೇನೆ!