ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಾಲಯಗಳ ಮುಂದೆ ಧ್ವಜಸ್ತಂಭಗಳು ಏಕೆ ಎಂದು ನಿಮಗೆ ತಿಳಿದಿದೆಯೇ?

ದೇವಾಲಯಗಳ ಮುಂದೆ ಧ್ವಜಸ್ತಂಭಗಳು ಏಕೆ ಎಂದು ನಿಮಗೆ ತಿಳಿದಿದೆಯೇ?

ಮಣಿಪುರದ ದೊರೆ,
ಮಯೂರ ಧ್ವಜ. ಅವನು ಮಹಾ ಪರಾಕ್ರಮಿ ಮತ್ತು ಮಹಾನ್ ಪರೋಪಕಾರಿ.

ಮಯೂರ ಧ್ವಜನು ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಹಾಕಿದನು ಕೋಪಗೊಂಡ ಪಾಂಡುಪುತ್ರರು ಮಯೂರ ಧ್ವಜನೊಂದಿಗೆ ಯುದ್ಧಕ್ಕೆ ಹೋಗುತ್ತಾರೆ. ಅವರೆಲ್ಲರನ್ನೂ ತನ್ನ ಪರಾಕ್ರಮದಿಂದ ಮಯೂರ ಧ್ವಜನು ಸೋಲಿಸುತ್ತಾನೆ
ತನ್ನ ಸಹೋದರರ ಸೋಲಿನ ಬಗ್ಗೆ ತಿಳಿದ ಧರ್ಮರಾಜನು ಸ್ವತಃ ತಾನೇ ಮಣಿಪುರಕ್ಕೆ ಹೊರಡುತ್ತಾನೆ. ಅದನ್ನು ಅರಿತ ಕೃಷ್ಣ ಧರ್ಮರಾಜನನ್ನು ತಡೆಯುತ್ತಾನೆ.

ಮಯೂರಧ್ವಜನ ಪರಾಕ್ರಮದ ಅರಿವಿದ್ದ ಕೃಷ್ಣನು ಅವನನ್ನು ಗೆಲ್ಲಲು ಕುಟಿಲೋಪಾಯವೊಂದನ್ನು ಹೇಳುತ್ತಾನೆ.

ಪಥಕದ ಪ್ರಕಾರ, ಶ್ರೀಕೃಷ್ಣ ಮತ್ತು ಧರ್ಮರಾಜ ಇಬ್ಬರೂ ವೃದ್ಧ ಬ್ರಾಹ್ಮಣರ ರೂಪದಲ್ಲಿ ಮಣಿಪುರವನ್ನು ತಲುಪುತ್ತಾರೆ.. ಅವರುಗಳನ್ನು ಕಂಡ ಮಯೂರಧ್ವಜ ಅವರನ್ನು ಆಹ್ವಾನಿಸಿ ಅವರಿಗೆ ದಾನ ನೀಡಲು ಬಯಸಿ, ಅವರು ಬಯಸಿದ್ದನ್ನು ನೀಡುವುದಾಗಿ ತಿಳಿಸಿದನು

ಆಗ ಶ್ರೀಕೃಷ್ಣನು ಹೇಳಿದನು, “ಮಹಾರಾಜ! ನಾವು ನಿಮ್ಮನ್ನು ನೋಡಲು ಬರುತ್ತಿರುವಾಗ…. ದಾರಿಯಲ್ಲಿ ಅರಣ್ಯ ಮಾರ್ಗದಲ್ಲಿ ದುರದೃಷ್ಟವಶಾತ್ ಪ್ರಾಣಿರಾಜ ಸಿಂಹವೊಂದು ಈತನ ಮಗನ ಮೇಲೆ ದಾಳಿ ಮಾಡಿತು, ಈ ಹಠಾತ್ ಘಟನೆಯಿಂದ ನಾವು ತುಂಬಾ ಚಿಂತಿತರಾಗಿದ್ದೆವು … ಮತ್ತು ಆ ಮಗನನ್ನು ಉಳಿಸಲು ನಾವು ಮೃಗರಾಜನನ್ನು ಪ್ರಾರ್ಥಿಸಿದೆವು.

  ಶ್ರೀ ಗುರು ರಾಘವೇಂದ್ರ ಮಹಿಮೆ ಶ್ರೀ ಸುಶಮೀಂದ್ರತೀರ್ಥರ ಮೂಲಕ ತೋರಿಸಿದ್ದು

ಆಗ ಮೃಗರಾಜು ಮಾನವ ಭಾಷೆಯಲ್ಲಿ ವಿಚಿತ್ರವಾಗಿ ಮಾತಾಡಿದನು…. “ನಿಮಗೆ ಈ ಹುಡುಗ ದಕ್ಕಬೇಕೆಂದರೆ ಮಣಿಪುರದ ದೊರೆ ಮಯೂರಧ್ವಜುವಿನ ಅರ್ಧ ದೇಹವನ್ನು ನನಗೆ ಆಹಾರವಾಗಿ ಕೊಡಿಸಿ.” ಎಂದು ಕೇಳಿದನು.ಉದಾರಿಗಳಾದ ತಾವು ಕರುಣೆ ತೋರಿ ತಮ್ಮ ಅರ್ಧ ದೇಹವನ್ನು ದಾನ ಮಾಡಿದರೆ, ಆ ಗಂಡು ಮಗುವನ್ನು ಉಳಿಸಿಕೊಳ್ಳುತ್ತೇವೆ.. ಭವಿಷ್ಯ ಇರುವ ಗಂಡುಮಗು…’’ ಎಂದು ದೈನ್ಯತೆಯಿಂದ ಕೃಷ್ಣ ನುಡಿದನು

ಆ ಮಾತುಗಳನ್ನು ಕೇಳಿದ ಮಯೂರಧ್ವಜನು ಯಾವುದೇ ಹಿಂಜರಿಕೆಯಿಲ್ಲದೆ ಬಾಲಕನ ಜೀವ ಉಳಿಸಲು ತನ್ನ ದೇಹವನ್ನು ದಾನ ಮಾಡಲು ಒಪ್ಪುತ್ತಾನೆ.

ಆಗ ಶ್ರೀಕೃಷ್ಣನು “ನಿನ್ನ ಹೆಂಡತಿ ಮಕ್ಕಳೇ ನಿನ್ನ ದೇಹವನ್ನು ಕತ್ತರಿಸಬೇಕು” ಎಂಬ ನಿಯಮವನ್ನೂ ವಿಧಿಸುತ್ತಾನೆ. ಅದಕ್ಕೂ ಮಯೂರ ಧ್ವಜ ಹಿಂಜರಿಯದೆ ಅತಿಥಿದೇವೋಭವ ಎಂದು ಗೌರವಿಸಿ ಆತನ ದೇಹಕ್ಕೆ ಪತ್ನಿ ಮತ್ತು ಮಗನಿಂದಲೇ ತನ್ನ ದೇಹ ತುಂಡರಿಸುವ ಸೂಕ್ತ ವ್ಯವಸ್ಥೆ ಮಾಡಿ ಪತ್ನಿ,ಮಗನನ್ನು ಕರೆಸಿ ತ್ಯಾಗಕ್ಕೆ ಸಿದ್ಧನಾಗಿ ಕುಳಿತನು.

ಮಯೂರಧ್ವಜುವಿನ ಹೆಂಡತಿ, ಮಗನು ಭಾರವಾದ ಹೃದಯದಿಂದ ಆದೇಶಿಸಿದ ಕಾರ್ಯಕ್ಕೆ ಬಲಭಾಗದಿಂದ ತಯಾರಾಗುತ್ತಾರೆ.

  ಸೋಮಾರಿತನ ಹಾಗೂ ರೈತನ ಶ್ರಮದ ಕಥೆ

ದಾನ ಶ್ರೇಷ್ಠನಾದ ಧರ್ಮರಾಜನೂ ಸಹ ಮಯೂರಧ್ವಜನ ದಾನಶೀಲತೆಗೆ
ಬೆರಗಾಗುತ್ತಾನೆ.!
ಅಷ್ಟರಲ್ಲಿ ಮಯೂರಧ್ವಜುವಿನ ಎಡಗಣ್ಣಿನಿಂದ ನೀರು ಬರುತ್ತಿರುವುದನ್ನು ಧರ್ಮರಾಜ ಗಮನಿಸುತ್ತಾನೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿ,,ಕಣ್ಣೀರು ಸುರಿಸುತ್ತಾ ನೀಡುವ ದಾನ ನಮಗೆ ಬೇಡ’ ಎನ್ನುತ್ತಾರೆ.
ಅದಕ್ಕೆ ಮರುಪ್ರತಿಕ್ರಿಯಿಸಿದ ಮಯೂರಧ್ವಜ –

“ಮಹಾತ್ಮ! ನೀನು ತಪ್ಪಾಗಿ ಭಾವಿಸಿರುವೆ. ನಾನು ದುಃಖ ಮತ್ತು ನೋವಿನಲ್ಲಿ ನನ್ನ ದೇಹವನ್ನು ನಿನಗೆ ಕೊಡುತ್ತಿಲ್ಲ. ನನ್ನ ಬಲಭಾಗಕ್ಕೆ ಪರೋಪಕಾರದ ಭಾಗ್ಯ ಸಿಕ್ಕಿದೆ… ನನಗೆ ಆ ಸೌಭಾಗ್ಯ ಸಿಗಲಿಲ್ಲವಲ್ಲ ಎಂಬ ಕಾರಣದಿಂದ ಎಡಗಣ್ಣು ನರಳುತ್ತಿದೆ” ಎಂದು ವಿವರಿಸುತ್ತಾನೆ. .

ಇದನ್ನು ಕೇಳಿದ ಕೃಷ್ಣ ಮತ್ತು ಧರ್ಮರಾಜರಿಗೆ ಬಹಳ ಆಶ್ಚರ್ಯವಾಯಿತು. ಮಯೂರಧ್ವಜನ ದಾನ ಶೀಲ ಗುಣಕ್ಕೆ ಮಾರುಹೋಗುತ್ತಾರೆ, ಅವರು ತಕ್ಷಣ ತಮ್ಮ ನಿಜವಾದ ರೂಪವನ್ನು ತೋರಿಸುತ್ತಾರೆ.
ಶ್ರೀಕೃಷ್ಣನು ಮಯೂರಧ್ವಜನಿಗೆ ಕೇಳುತ್ತಾನೆ _

“ನಿನ್ನ ಔದಾರ್ಯವನ್ನು ಮೆಚ್ಚುತ್ತೇನೆ, ನಿನಗೆ ಯಾವ ವರ ಬೇಕು?”
ಮಯೂರಧ್ವಜನು ಮಹಾನ್ ವ್ಯಕ್ತಿಗಳ ನಿಜವಾದ ರೂಪಗಳನ್ನು ನೋಡಿದನು
“ಓ ಭಗವಂತ! ನನ್ನ ಈ ದೇಹ ಅಶಾಶ್ವತ.. ಕಾಲಕ್ರಮದಲ್ಲಿ ಈ ದೇಹ ಅಳಿದು ಹೋದರೂ ನನ್ನ ಆತ್ಮವು ಪರೋಪಕಾರಕ್ಕೆ (ಇನ್ನೊಬ್ಬರ ಸಹಾಯಕ್ಕೆ) ಬರುವಂತಾಗಲಿ ಮತ್ತು ನಾನು ಸದಾ ನಿನ್ನ ಮುಂದೆಯೆ ಇರುವಂತೆ ಆಶೀರ್ವದಿಸು” ಎಂದು ಕೋರುತ್ತಾನೆ.
ಆಗ ಶ್ರೀಕೃಷ್ಣ ಆಶೀರ್ವದಿಸಿ.. “ತಥಾಸ್ತು” ,ಇಂದಿನಿಂದ ಜಗತ್ತಿನ ಪ್ರತಿಯೊಂದು ದೇವಾಲಯದ ಮುಂದೆ ನಿನ್ನ ಹೆಸರಿನ ಧ್ವಜಸ್ತಂಭಗಳು ನಿನ್ನ ಪ್ರತೀಕವಾಗಿ ಮೂಡುತ್ತವೆ(ಇರುತ್ತವೆ). ಅವುಗಳನ್ನು ಆಶ್ರಯಿಸುವ ನಿನ್ನ ಆತ್ಮವು ಪರಮಾತ್ಮನ ಸನ್ನಿಧಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ…….

  ತೆನಾಲಿ ರಾಮ ಮತ್ತು ವರ್ಣರಂಜಿತ ಹಕ್ಕಿ

ಮೊದಲು ನಿನ್ನನ್ನು ದರ್ಶಿಸಿ, ಪ್ರದಕ್ಷಿಣೆ ನಮಸ್ಕಾರ ಮಾಡಿದ ನಂತರವೆ ಜನರು ಗುಡಿಯಲ್ಲಿರುವ ದೇವರನ್ನು ಭೇಟಿ ಮಾಡುತ್ತಾರೆ. ನಿಮ್ಮ ತಲೆಯ ಮೇಲೆ ಇಟ್ಟ ದೀಪವು ರಾತ್ರಿಯಲ್ಲಿ ದಾರಿಹೋಕರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಆಶೀರ್ವದಿಸುತ್ತಾನೆ.

ಅದಕ್ಕಾಗಿಯೇ ದೇವಾಲಯಗಳ ಮುಂದೆ ಧ್ವಜಸ್ತಂಭಗಳನ್ನು ಸ್ಥಾಪಿಸುವುದು ಅಂದಿನಿಂದಲೂ ರೂಢಿಯಲ್ಲಿದೆ. ಇಂತಹ ಮಹಾನುಭಾವಿ, ತ್ಯಾಗಪುರುಷ ಮಯೂರಧ್ವಜನ ಪ್ರತೀಕವಾಗಿರುವ ಧ್ವಜಸ್ತಂಭಗಳ ನೆರಳು ಕೂಡ ತಮ್ಮ ಮನೆಗಳ ಮೇಲೆ ಬೀಳಬಾರದು ಎಂದು ಹೇಳುವುದು ಆ ಮಹಾನ್ ವ್ಯಕ್ತಿಗೆ ಅಪಚಾರವಾಗಿದ್ದು, ಇದು ಬರೀ ಮೂಢ ನಂಬಿಕೆಯಾಗಿರಬಹುದು

Leave a Reply

Your email address will not be published. Required fields are marked *

Translate »