ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಕಷ್ಟಹರ ಚತುರ್ಥಿ

ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ
. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನುಂತರ ಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು.

ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ.

ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

ಉಚ್ಚಿಷ್ಟ ಗಣಪತಿ ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ನದ ಈ ಗಣಪತಿಯು 6 ಕೈಗಳು ಹೊಂದಿದ್ದು ಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.

ದ್ವಿಜ ಗಣೇಶ, (ಎರಡು ಸಲ ಹುಟ್ಟಿದಾತ) ನಿಮಗೆ ಒಳ್ಳೆಯ ಆರೋಗ್ಯ ಮತ್ತು ಸಮೃದ್ಧಿ ನೀಡುವರು. ಗಣಪತಿ ದೇವರಿಗೆ ನಾಲ್ಕು ತಲೆ ಮತ್ತು ಜಪಮಾಲೆ ಮಣಿಗಳು, ಪುಸ್ತಕ, ನೀರು ಮತ್ತು ದಂಡದೊಂದಿಗೆ ನಾಲ ‌ ‌ ಸಂಕಷ್ಟಹರ ಚತುರ್ಥಿಯ ಈ ಕ್ರಮಗಳಿಂದ ಅನೇಕ ಸಮಸ್ಯೆಗಳು ಪರಿಹಾರ..!

ಪ್ರತಿ ತಿಂಗಳ ಕೃಷ್ಣ ಮತ್ತು ಶುಕ್ಲ ಪಕ್ಷಗಳೆರಡರ ಚತುರ್ಥಿಯಂದು ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಒಂದೇ ವ್ಯತ್ಯಾಸವೆಂದರೆ ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟಹರ ಶ್ರೀ ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಶ್ರೀ ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟಹರ ಚತುರ್ಥಿ ಎಂದರೆ ತೊಂದರೆಗಳನ್ನು ನಿವಾರಿಸುವ ಚತುರ್ಥಿ ಎಂದರ್ಥ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟವನ್ನು ಕೊಡುವವನು ಎಂದು ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವುದರಿಂದ ಶೀಘ್ರ ಫಲ ದೊರೆಯುವುದು ಎನ್ನುವ ನಂಬಿಕೆಯಿದೆ. ಮತ್ತು ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವು ಹೆಚ್ಚಾಗುತ್ತದೆ. ಸಂಕಷ್ಟ ಚತುರ್ಥಿ ದಿನದಂದು ನಾವು ಯಾವೆಲ್ಲಾ ಪರಿಹಾರಗಳನ್ನು ತೆಗೆದುಕೊಳ್ಳಬೇಕು ಗೊತ್ತಾ..?

​ಗಣೇಶ ಸ್ತೋತ್ರ ಮತ್ತು ಮೋದಕ

ವಿವಾಹ ಯೋಗಕ್ಕಾಗಿ ಈ ದಿನದಂದು, ‘ಓಂ ಗ್ಲೌಂ ಗಣಪತಯೇ ನಮಃ’ ಎನ್ನುವ ಮಂತ್ರವನ್ನು 11 ಜಪಮಾಲೆಗಳು ಪೂರ್ಣಗೊಳ್ಳುವವರೆಗೆ ಪಠಿಸಿ. ಗಣೇಶ ಸ್ತೋತ್ರವನ್ನು ಪಠಿಸಿ ಮತ್ತು ಗಣೇಶನಿಗೆ ಮೋದಕವನ್ನು ಅರ್ಪಿಸಿ.

  ಶ್ರೇಷ್ಠ ತೆನಾಲಿ ರಾಮನ ಕಥೆ

​ಗಣಪತಿ ನಾಮ ಸ್ಮರಣೆ

ಚತುರ್ಥಿಯ ದಿನದಂದು, ಗಣಪತಿಯ ಹೆಸರನ್ನು ಸ್ಮರಿಸಿ, ಯಾವುದೇ ಗಣೇಶನ ದೇವಾಲಯದಲ್ಲಿ ವಿಧಿ – ವಿಧಾನಗಳ ಪ್ರಕಾರ ಪೂಜೆಯನ್ನು ಮಾಡಿ. ಗಣೇಶನ ನಾಮ ಸ್ಮರಣೆ ಮಾಡುವುದರಿಂದ ಗಣೇಶನು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ.

​ಇದರ ನೈವೇದ್ಯ

ಶ್ರೀ ಗಣೇಶನಿಗೆ ತುಪ್ಪ-ಬೆಲ್ಲವನ್ನು ನೈವೇದ್ಯ ಮಾಡಿ ಆ ಭೋಗವನ್ನು ಹಸುವಿಗೆ ಉಣಿಸಿದರೆ ಮನೆಯಲ್ಲಿ ಆರ್ಥಿಕ ಸಮೃದ್ಧಿ ಬರುತ್ತದೆ.

​ಈ ಸ್ತೋತ್ರವೂ ಪ್ರಯೋಜನಕಾರಿ

ಭೂಸ್ವಾಧೀನಕ್ಕಾಗಿ, ಸಂಕಟನಾಶನ ಗಣೇಶ ಸ್ತೋತ್ರ ಮತ್ತು ಋಣಮೋಚನ ಮಂಗಳ ಸ್ತೋತ್ರವನ್ನು 11 ಬಾರಿ ಪಠಿಸಿ, ಇದರಿಂದ ಭೂಮಿಯನ್ನು ಪಡೆದುಕೊಳ್ಳಲು ಬಲವಾದ ಅವಕಾಶಗಳಿವೆ.

​ಗಣೇಶ ಚಾಲೀಸಾ ಪಠಿಸಿ
ಚತುರ್ಥಿಯ ದಿನದಂದು ಶ್ರೀ ಗಣೇಶ ಮಂತ್ರಗಳ ಜೊತೆಗೆ ಶ್ರೀ ಗಣೇಶ ಚಾಲೀಸಾ, ಕನಕಧಾರಾ ಸ್ತೋತ್ರ, ಲಕ್ಷ್ಮೀ ಸೂಕ್ತವನ್ನು ಪಠಿಸಿ. ಇದರಿಂದ ಸಂಪತ್ತನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುವುದು.

​ಗಣೇಶ ಮಂತ್ರ
ಚತುರ್ಥಿಯ ದಿನ ‘ಗಜಾನನಂ ಭೂತ ಗಣಾದಿ ಸೇವಿತಂ, ಕಪಿತ್ಥ ಜಂಬು ಫಲ ಚಾರು ಭಕ್ಷಣಂ | ‘ಉಮಾಸುತಂ ಶೋಕ ವಿನಾಶಕಾರಕಂ, ನಮಾಮಿ ವಿಘ್ನೇಶ್ವರ ಪಾದ ಪಂಕಜಂ’ ಎನ್ನುವ ಮಂತ್ರವನ್ನು ಪಠಿಸುವ ಮೂಲಕ ಗಣಪತಿಯನ್ನು ಪೂಜಿಸಿ. ಇದು ನಿಮ್ಮ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತದೆ.

​ಕುಬೇರ ಮಂತ್ರ
ಸಂಪತ್ತನ್ನು ಪಡೆಯುವ ಆಸೆಯಿದ್ದರೆ, ಗಣೇಶ ಸ್ತೋತ್ರ ಮತ್ತು ಕುಬೇರ ಮಂತ್ರದೊಂದಿಗೆ ‘ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ನೀವು ಸಂಪತ್ತಿನ ಲಾಭವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ.

​ಈ ಬಣ್ಣದ ಗಣಪತಿ
ಮನೆಯಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು, ಚತುರ್ಥಿಯ ದಿನದಂದು, ಮನೆಯ ದೇವರ ಕೋಣೆಯಲ್ಲಿ ಬಿಳಿ ಬಣ್ಣದ ಗಣಪತಿಯನ್ನು ಸ್ಥಾಪಿಸಿ ಮತ್ತು ಅವುಗಳನ್ನು ಪೂಜಿಸಿ.

​ಭುವನೇಶ್ವರಿ ಸ್ತೋತ್ರ
ನೀವು ನಿಮ್ಮ ಸ್ವಂತ ಮನೆಯನ್ನು ಪಡೆಯಲು ಬಯಸಿದರೆ, ನಂತರ ಶ್ರೀ ಗಣೇಶ ಪಂಚರತ್ನ ಸ್ತೋತ್ರ ಮತ್ತು ಮಾತಾ ಭುವನೇಶ್ವರಿ ಚಾಲೀಸಾ ಅಥವಾ ಭುವನೇಶ್ವರಿ ಸ್ತೋತ್ರವನ್ನು ಪಠಿಸಿ, ಅದು ಪ್ರಯೋಜನಕಾರಿಯಾಗಿದೆ.

  ಮಂತ್ರಕ್ಕೆ ಶಕ್ತಿಕೊಡೋ ಬೀಜ ಮಂತ್ರಗಳು

​ತಿಲಕ
ಕೆಲಸಕ್ಕೆ ಹೋಗುವ ಮೊದಲು ಗಣೇಶನಿಗೆ ಸಿಂಧೂರ ತಿಲಕವನ್ನು ಹಚ್ಚಿ ಮತ್ತು ನಿಮ್ಮ ಸ್ವಂತ ಹಣೆಗೆ ತಿಲಕವನ್ನು ಹಚ್ಚಿಕೊಂಡು ಕೆಲಸಕ್ಕೆ ಹೊರಡಿ. ಇದರಿಂದ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ.

ಸಂಕಷ್ಟಹರ ಚತುರ್ಥಿ ಹಬ್ಬದ ದಿನದಂದು ಅಥವಾ ವ್ರತದ ದಿನದಂದು ನೀವು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದ ಪ್ರತಿ ಕ್ಷೇತ್ರವು ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತದೆ ಮತ್ತು ಪ್ರಗತಿಗೆ ಸಹಕಾರ ನೀಡು ‌ ‌ ‌
ಸಂಕಷ್ಟ ಚತುರ್ಥಿ ಎಂದರೇನು..? ಮಹತ್ವ ಮತ್ತು ಮಂತ್ರ ಹೀಗಿದೆ.!

ಒಂದು ಮಾಸದಲ್ಲಿ ಎರಡು ಚತುರ್ಥಿ ತಿಥಿಗಳಿರುತ್ತವೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟಹರ ಚತುರ್ಥೀ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ 24 ಚತುರ್ಥಿಗಳು ಮತ್ತು ಪ್ರತಿ ಮೂರು ವರ್ಷಗಳ ನಂತರ ಅಧಿಕ ಮಾಸದಲ್ಲಿ 26 ಚತುರ್ಥಿಗಳು ಬರುತ್ತವೆ. ಪ್ರತಿ ಚತುರ್ಥಿಯ ಮಹಿಮೆ ಮತ್ತು ಪ್ರಾಮುಖ್ಯತೆ ವಿಭಿನ್ನವಾಗಿರುತ್ತದೆ. ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಸಂಕಷ್ಟ ಚತುರ್ಥಿ ಎಂದರೇನು..? ಮತ್ತು ಅದರ ಮಹತ್ವವೇನು ಎಂಬುದನ್ನು ತಿಳಿಯೋಣ.

ಸಂಕಷ್ಟದ ಅರ್ಥ:
ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಯಾವುದೇ ರೀತಿಯ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಈ ಚತುರ್ಥಿಯಂದು ವಿಧಿವತ್ತಾಗಿ ಉಪವಾಸವಿದ್ದು ಗೌರಿಯ ಪುತ್ರನಾದ ಗಣೇಶನನ್ನು ಪೂಜಿಸಬೇಕು. ಈ ದಿನ ಜನರು ಸೂರ್ಯೋದಯದ ಸಮಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡುತ್ತಾರೆ.

ಸಂಕಷ್ಟ ಮತ್ತು ವಿನಾಯಕ ಚತುರ್ಥಿಯ ವ್ಯತ್ಯಾಸ:
ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಮತ್ತು ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಒಂದು ಚತುರ್ಥಿಯು ಹುಣ್ಣಿಮೆಯ ನಂತರ ಬಂದರೆ, ಇನ್ನೊಂದು ಚತುರ್ಥಿಯು ಅಮಾವಾಸ್ಯೆಯ ನಂತರ ಬರುತ್ತದೆ.

  ಚಾಂದ್ರಮಾನ ಕಾಲಗಣನೆಯೇ ಒಂದು ದೊಡ್ಡ ಅಧ್ಯಯನ ವಿಚಾರ

ಚತುರ್ಥಿ ತಿಥಿ:
ಚತುರ್ಥಿ ತಿಥಿಯ ಸಂದರ್ಭದಲ್ಲಿ ಶುಭ ಕಾರ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಚತುರ್ಥಿ ಗುರುವಾರ ಬಂದರೆ, ಸಾವು ಸಂಭವಿಸುತ್ತದೆ ಮತ್ತು ಚತುರ್ಥಿ ತಿಥಿಯು ಶನಿವಾರ ಬಂದರೆ ಅಂತಹ ಪರಿಸ್ಥಿತಿಯಲ್ಲಿ ಚತುರ್ಥಿಯು ಅನೇಕ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆಗ್ನೇಯ ದಿಕ್ಕನ್ನು ಚತುರ್ಥಿ ತಿಥಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚತುರ್ಥಿಯ ದಿನ ಗಣೇಶನನ್ನು ಪೂಜಿಸುವಾಗ ಈ ದಿಕ್ಕಿನಲ್ಲಿ ಪೂಜೆಯನ್ನು ಮಾಡಬೇಕು.

ಸಂಕಷ್ಟಹರ ಚತುರ್ಥಿ ಮಂತ್ರ:
1. ಗಣೇಶ ಸ್ತುತಿ ಮಂತ್ರ :
”ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಚಾರೂ ಭಕ್ಷಣಂ|
ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರಪಾದಪಂಕಜಂ||”

  1. ಶ್ರೀ ಗಣೇಶ ಗಾಯತ್ರಿ ಮಂತ್ರ :
    ”ಓಂ ಏಕದಂತಾಯ ವಿದ್ಮಹೇ
    ವಕ್ರತುಂಡಾಯ ಧೀಮಹಿ
    ತನ್ನೋ ದಂತಿಃ ಪ್ರಚೋದಯಾತ್‌”
  2. ವಕ್ರತುಂಡ ಮಂತ್ರ :
    ”ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭಃ|
    ನಿರ್ವಘ್ನಂ ಕುರೂ ಮೇ ದೇವ ಸರ್ವ ಕಾರ್ಯೇಷು ಸರ್ವದಾ||”
  3. ಏಕದಂತ ಮಂತ್ರ :
    ”ಏಕದಂತಂ ಮಹಾಕಾಯಂ ಲಂಬೋದರ ಗಜಾನನಂ|
    ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಾಮ್ಯಹಂ||”
  4. ಈ ಮಂತ್ರವನ್ನು ಪಠಿಸಿ :
    ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸಿದ ನಂತರ, ‘ಓಂ ಗಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ’ ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು. ಇದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ.

ಸಂಕಷ್ಟಹರ ಚತುರ್ಥಿಯ ದಿನದಂದು ದಿನವಿಡೀ ಉಪವಾಸವಿದ್ದು, ಗಣೇಶನನ್ನು ಪೂಜಿಸಲಾಗುತ್ತದೆ. ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.


Leave a Reply

Your email address will not be published. Required fields are marked *

Translate »