ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಮಂತ್ರಾಲಯ

ಮಂತ್ರಾಲಯದಪಂಚಮುಖಿಆಂಜನೇಯ_ದೇವಸ್ಥಾನ..!

ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ತುಂಗಭದ್ರಾ ನದಿಯ ಇನ್ನೊಂದು ಬದಿಯಲ್ಲಿದೆ. ಇದು ಕರ್ನಾಟಕದಲ್ಲಿರುವ ಪ್ರಮುಖ ಹಾಗೂ ಶಕ್ತಿಶಾಲಿ ಆಂಜನೇಯ ಸ್ವಾಮಿ ದೇವಾಲಯವಾಗಿದೆ. ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ತೆರಳುವ ಮೊದಲು 12 ವರ್ಷಗಳ ಕಾಲ ಈ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ನೀವು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಾಗ ಭೇಟಿ ನೀಡಲೇಬೇಕಾದ ಆಂಜನೇಯ ಸ್ವಾಮಿ ದೇವಾಲಯವಿದು.
ಗುರು ರಾಘವೇಂದ್ರರು ಪಂಚಮುಖಿ ಆಂಜನೇಯನಿಗಾಗಿ 12 ವರ್ಷಗಳ ಕಾಲ ಇಲ್ಲಿ ತಪಸ್ಸು ಮಾಡಿದರು ಎಂದು ಜನರು ಹೇಳುತ್ತಾರೆ. ಇಲ್ಲಿ ಆಂಜನೇಯನು ವರಾಹ, ಗರುಡ, ನರಸಿಂಹ, ಹಯಗ್ರೀವ ಮತ್ತು ಹನುಮಂತನಿಂದ ಕೂಡಿದ ಪಂಚಮುಖದೊಂದಿಗೆ ಅಂದರೆ 5 ಮುಖದೊಂದಿಗೆ ರಾಘವೇಂದ್ರ ಸ್ವಾಮಿಯ ಮುಂದೆ ಪ್ರತ್ಯಕ್ಷನಾದನು ಎಂದು. ರಾಘವೇಂದ್ರ ಸ್ವಾಮಿಗಳು ಹನುಮಂತನ ದರ್ಶನ ಪಡೆದ ಸ್ವಾಮಿಗಳು ಹಾಡಿ ಹೊಗಳಿದರು ಎಂದು ಪ್ರತೀತಿ.

  ನವವಧುವಿನ ಕೈಯಲ್ಲಿ ಯಾಕೆ ಸೇರು ಒದ್ದೆಸುವುದು?

ಇಂದಿಗೂ ಭಕ್ತರು ಶ್ರೀ ಕೊಲ್ಹಾಪುರ ಮಹಾಲಕ್ಷ್ಮಿ, ವೆಂಕಟೇಶ್ವರ, ಮತ್ತು ಭಗವಾನ್ ವಿಷ್ಣು ಶ್ರೀ ಗುರು ರಾಘವೇಂದ್ರರಿಗೆ ತಮ್ಮ ದರ್ಶನವನ್ನು ನೀಡಿದ್ದಾರೆ ಎಂದು ಭಕ್ತರು ನಂಬುತ್ತಾರೆ. ತ್ರೇತಾಯುಗದಲ್ಲಿ ರಾಮ ಮತ್ತು ಲಕ್ಷ್ಮಣರನ್ನು ಮಹಿರಾವಣನು ಅಪಹರಿಸಿಕೊಂಡು ಹೋದಾಗ ಅವರನ್ನು ರಕ್ಷಿಸಲು ಆಂಜನೇಯ ಇಲ್ಲಿಗೆ ಬಂದನೆಂದು ಪುರಾಣ ಹೇಳುತ್ತದೆ. ಆಂಜನೇಯನು ಮಹಿರಾವಣನ ಬಳಿಗೆ ಹೋಗಲು ಎರುಕಲಾಂಬ ದೇವಾಲಯದ ಬಳಿಯ ಗುಹೆಯನ್ನು ಬಳಸಿಕೊಂಡನೆಂದು ಜನರು ಭಾವಿಸುತ್ತಾರೆ. ದೇವಾಲಯದ ಹೊರಗೆ, ಜೋಡಿ ಪಾದರಕ್ಷಗಳಿದ್ದು, ಇದನ್ನು ಜನರು ಆಂಜನೇಯನ ಪಾದಗಳೆಂದು ನಂಬುತ್ತಾರೆ.

  ಮಧ್ಯಪ್ರದೇಶದ ಅಗರ್ ಬೈಜನಾಥ್ ಮಹಾದೇವ ಮಂದಿರದ ವಿಸ್ಮಯ

ಹನುಮ ಜಯಂತಿ, ಮಂಗಳವಾರ, ಭಾನುವಾರ, ಅಮಾವಾಸ್ಯೆ, ಪೌರ್ಣಮಿ ಮುಂತಾದ ದಿನಗಳಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಜನರು ಸೇರುತ್ತಾರೆ. ಆಂಜನೇಯನು ದೇವಾಲಯದ ಬಳಿ ಇರುವ ದೊಡ್ಡ ಬಂಡೆಗಳ ಕಟ್ಟಡಗಳನ್ನು ತನ್ನ ಹಾಸಿಗೆ ಮತ್ತು ದಿಂಬುಗಳಾಗಿ ಬಳಸಿಕೊಂಡಿದ್ದನೆಂದು ಹೇಳಲಾಗುತ್ತದೆ. ಇಲ್ಲಿ ಪಂಚಮುಖಿ ಆಂಜನೇಯನು ತನ್ನ ಮೊಣಕಾಲಿನ ಮೇಲೆ ಮಡಚಿದ ಕೈಗಳನ್ನು ಇಟ್ಟುಕೊಂಡು ಪೂರ್ವ ದಿಕ್ಕಿಗೆ ಬೆನ್ನು ಹಾಕಿ ಕುಳಿತಿರುವುದನ್ನು ನೀವಿಲ್ಲಿ ನೋಡಬಹುದು. ಮಂತ್ರಾಲಯದಲ್ಲಿರುವ ಪಂಚಮುಖಿ ಹನುಮಂತನನ್ನು ಪೂಜಿಸುವುದರಿಂದ ಭಕ್ತರು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಭಯ ಮತ್ತು ದುಃಖದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆಯಿದೆ.

  ಮಾತಂಗೇಶ್ವರ ಮಹದೇವ ದೇವಾಲಯ ಖುಜರಾಹೋ

ಹನುಮ ಜಯಂತಿಯಂತಹ ವಿಶೇಷ ದಿನಗಳಲ್ಲಿ ಇಲ್ಲಿಗೆ ಸಾಕಷ್ಟು ಜನರು ಆಂಜನೇಯನ ಪೂಜೆಗಾಗಿ ಬರುತ್ತಾರೆ. ಮಂತ್ರಾಲಯಕ್ಕೆ ಬರುವ ಬಹಳಷ್ಟು ರಾಘವೇಂದ್ರ ಸ್ವಾಮಿ ಅನುಯಾಯಿಗಳು ಈ ಹನುಮಾನ್ ದೇವಸ್ಥಾನದ ದರ್ಶನವನ್ನು ಪಡೆದುಕೊಳ್ಳದೆ ಹಾಗೇ ಹೋಗುವುದಿಲ್ಲ. ದೇವಸ್ಥಾನದ ಬಳಿ ಹೆಚ್ಚು ಆಹಾರ ಮತ್ತು ಪಾನೀಯ ಅಂಗಡಿಗಳಿಲ್ಲ. ದೇವಾಲಯದ ಪೂರ್ವ ಭಾಗದಲ್ಲಿ ಹಾಸಿಗೆ ಮತ್ತು ದಿಂಬಿನಂತೆ ಕಾಣುವ ಬೃಹತ್ ಬಂಡೆಯ ರಚನೆಗಳಿವೆ.


Leave a Reply

Your email address will not be published. Required fields are marked *

Translate »