ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾಗದೇವತೆಯ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?

🕉️ನಾಗಪೂಜೆ
ನಾಗದೇವತೆಯ ಪೂಜೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ಎಂದು ಸರ್ವೇಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಪೂಜೆ ಮಾಡುವಾಗ ಅದು ಭಾವಪೂರ್ಣವಾಗಿ ಆಗಿ ನಾಗದೇವತೆಯ ಕೃಪೆಯು ಆಗಬೇಕು ಎಂದು ಧರ್ಮಾಚರಣೆಯ ಅಂಗವಾಗಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಆಚಮನ ಮಾಡುವುದು

ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು

೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |

ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.

೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.

೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |

ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.

ದೇವತಾಸ್ಮರಣ

ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.

ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.

ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.

ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.

ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.

ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.

ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.

ಅವಿಘ್ನಮಸ್ತು | ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.

ಸುಮುಖಶ್ಚೈಕದನ್ತಶ್ಚ ಕಪಿಲೋ ಗಜಕರ್ಣಕಃ ।
ಲಮ್ಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ ।।

ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚನ್ದ್ರೋ ಗಜಾನನಃ ।
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ ।।

ವಿದ್ಯಾರಮ್ಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಙ್ಗ್ರಾಮೇ ಸಙ್ಕಟೇಚೈವ ವಿಘ್ನಸ್ತಸ್ಯ ನ ಜಾಯತೇ ।।

ಶುಕ್ಲಾಮ್ಬರಧರಂ ದೇವಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾನ್ತಯೇ ।।

ಸರ್ವಮಙ್ಗಲಮಾಙ್ಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣ್ಯೇ ತ್ರ್ಯಮ್ಬಕೇ ಗೌರಿ ನಾರಾಯಣಿ ನಮೋಽಸ್ತುತೇ ।

ಸರ್ವದಾ ಸರ್ವಕಾರ್ಯೇಷು ನಾಸ್ತಿ ತೇಷಾಮಮಙ್ಗಲಮ್ ।
ಯೇಷಾಂ ಹೃದಿಸ್ಥೋ ಭಗವಾನ್ಮಙ್ಗಲಾಯತನಂ ಹರಿಃ ।।

ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚನ್ದ್ರಬಲಂ ತದೇವ ।
ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಽಙ್ಘ್ರಿಯುಗಂ ಸ್ಮರಾಮಿ ।।

ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯಃ ।
ಯೇಷಾಮಿನ್ದೀವರಶ್ಯಾಮೋ ಹೃದಯಸ್ಥೋ ಜನಾರ್ದನಃ ।।

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ।।

ವಿನಾಯಕಂ ಗುರುಂ ಭಾನುಂ ಬ್ರಹ್ಮವಿಷ್ಣುಮಹೇಶ್ವರಾನ್ ।
ಸರಸ್ವತೀಂ ಪ್ರಣೌಮ್ಯಾದೌ ಸರ್ವಕಾರ್ಯಾರ್ಥಸಿದ್ಧಯೇ ।।

ಅಭೀಪ್ಸಿತಾರ್ಥಸಿದ್ಧಯರ್ಥಂ ಪೂಜಿತೋ ಯಃ ಸುರಾಸುರೈಃ ।
ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮಃ ।।

ಸರ್ವೇಷ್ವಾರಬ್ಧಕಾರ್ಯೇಷು ತ್ರಯಸ್ತ್ರಿಭುವನೇಶ್ವರಾಃ ।
ದೇವಾ ದಿಶನ್ತು ನಃ ಸಿದ್ಧಿಂ ಬ್ರಹ್ಮೇಶಾನಜನಾರ್ದನಾಃ ।।

ದೇಶಕಾಲಕಥನ

‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.

ದೇಶಕಾಲ: ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್‍ವೇತವಾರಾಹಕಲ್ಪೇ ವೈವಸ್ವತಮನ್ವನ್ತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಣ್ಡೇ ದಕ್ಷಿಣಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಣ್ಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶೋಭಕೃತ್ ನಾಮ ಸಂವತ್ಸರೇ ದಕ್ಷಿಣಾಯನೇ ವರ್ಷಾ ಋತೌ ಶ್ರಾವಣ ಮಾಸೇ ಶುಕ್ಲ ಪಕ್ಷೇ ಪಂಚಮ್ಯಾಂ ತಿಥೌ, ಸೋಮ ವಾಸರೇ, ಚಿತ್ರಾ ದಿವಸ ನಕ್ಷತ್ರೇ, ಶುಭ ಯೋಗೇ (22.20 ವರೆಗೆ), ಬವ ಕರಣೇ (13.15 ನಂತರ ಕೌಲವ), ಕನ್ಯಾ (17.30 ನಂತರ ತುಲಾ) ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಸಿಂಹ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ಮೇಷ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶನೈಶ್‍ಚರೇ ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಙ್ ಗ್ರಹ-ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…

  ಗಾಯತ್ರಿ ಮಂತ್ರ

‘ದೇಶಕಾಲ’ದ ಸಂದರ್ಭದಲ್ಲಿನ ಸೂಚನೆ

೧. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.

೨. ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||

ಅರ್ಥ : ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.

ಸಂಕಲ್ಪ

ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ಮಮ ಆತ್ಮನಃ ಪರಮೇಶ್ವರ-ಆಜ್ಞಾರೂಪ-ಸಕಲ-ಶಾಸ್ತ್ರ-ಶ್ರುತಿಸ್ಮೃತಿ-ಪುರಾಣೋಕ್ತ-ಫಲ-ಪ್ರಾಪ್ತಿದ್ವಾರಾ ಮಮ ಸಕುಟುಮ್ಬಸ್ಯ ಸಪರಿವಾರಸ್ಯ ಸರ್ವದಾ ಸರ್ವತಃ ಸರ್ಪಭಯನಿವೃತ್ತಿಪೂರ್ವಕಂ ಸರ್ಪಪ್ರಸಾದಸಿದ್ಧಿದ್ವಾರಾ ಶ್ರೀಪರಮೇಶ್ವರಪ್ರೀತ್ಯರ್ಥಂ ಶ್ರಾವಣಶುಕ್ಲಪಞ್ಚಮ್ಯಾಂ ಯಥಾಮೀಲಿತೋಪಚಾರೈಃ ನಾಗಪೂಜಾಂ ಕರಿಷ್ಯೇ । ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ ಮಹಾಗಣಪತಿಸ್ಮರಣಂ ಕರಿಷ್ಯೇ । ಶರೀರಶುದ್ಧ್ಯರ್ಥಂ ದಶವಾರಂ ವಿಷ್ಣುಸ್ಮರಣಂ ಕರಿಷ್ಯೇ। ಕಲಶ-ಘಣ್ಟಾ-ದೀಪ-ಪೂಜನಂ ಚ ಕರಿಷ್ಯೇ ।

‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.

ಶ್ರೀಗಣಪತಿಸ್ಮರಣ

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಋದ್ಧಿ-ಬುದ್ಧಿ-ಶಕ್ತಿ-ಸಹಿತ-ಮಹಾಗಣಪತಯೇ ನಮೋ ನಮಃ ।

ಮಹಾಗಣಪತಯೇ ನಮಃ । ಧ್ಯಾಯಾಮಿ ।

ಮಹಾಗಣಪತಿಯನ್ನು ಮನಃಪೂರ್ವಕ ಸ್ಮರಿಸಿ ಕೈಜೋಡಿಸಿ ನಮಸ್ಕಾರಗಳನ್ನು ಸಲ್ಲಿಸಬೇಕು.

ಇದಾದ ನಂತರ ಶರೀರಶುದ್ಧಿಗಾಗಿ ೧೦ ಬಾರಿ ಶ್ರೀವಿಷ್ಣುವಿನ ಸ್ಮರಣೆಯನ್ನು ಮಾಡಬೇಕು. ಅಂದರೆ ೯ ಬಾರಿ ‘ವಿಷ್ಣವೇ ನಮೋ’ ಹೇಳಿ, ಕೊನೆಯದಾಗಿ ‘ವಿಷ್ಣವೇ ನಮಃ” ಎಂದು ಹೇಳಬೇಕು.

ಪೂಜೆಗೆ ಸಂಬಂಧಿಸಿದ ಉಪಕರಣಗಳ ಪೂಜೆ

ಕಲಶಪೂಜೆ

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಅರ್ಥ: ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.

ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ || (ಕಲಶದಲ್ಲಿ ಗಂಗಾದಿ ತೀರ್ಥಗಳನ್ನು ಆಹ್ವಾನಿಸುತ್ತೇನೆ)

ಕಲಶದೇವತಾಭ್ಯೋ ನಮಃ |

ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||

ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.

ಘಂಟೆಯ ಪೂಜೆ

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||

ಅರ್ಥ: ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ನಾದ ಮಾಡುವ ಘಂಟಾದೇವತೆಗೆ ವಂದಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ.

ಘಂಟಾಯೈ ನಮಃ |

ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಘಂಟೆಗೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.

ದೀಪಪೂಜೆ

ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ ।
ಆರೋಗ್ಯಂ ದೇಹಿ ಪುತ್ರಾಂಶ್ಚ ಮತ: ಶಾನ್ತಿಂ ಪ್ರಯಚ್ಛ ಮೇ ।।

ದೀಪದೇವತಾಭ್ಯೋ ನಮಃ|

ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಅರ್ಥ: ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)

ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ

ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.

  ಶ್ರೀ ರಾಮಾನುಜಾಚಾರ್ಯರ ಪ್ರಸಾದ ಪ್ರಭಾವದ ಕಥೆ

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.

ಅರಿಶಿನ ಮತ್ತು ಚಂದನವನ್ನು ಬೆರೆಸಿ ಗೋಡೆಯ ಮೇಲೆ ಅಥವಾ ಮಣೆಯ ಮೇಲೆ ನಾಗಗಳ ಚಿತ್ರವನ್ನು ಬಿಡಿಸಬೇಕು. ಚಿತ್ರದ ಸ್ಥಳದಲ್ಲಿ ಮುಂದಿನ ನಾಮಮಂತ್ರಗಳನ್ನು ಉಚ್ಚರಿಸಿ ನವನಾಗಗಳನ್ನು ಆಹ್ವಾನಿಸಬೇಕು. ಬಲಗೈಯಲ್ಲಿ ಅಕ್ಷತೆಯನ್ನು ಹಿಡಿದು ‘ಆವಾಹಯಾಮಿ’ ಎಂದು ಹೇಳುವಾಗ ನಾಗದೇವತೆಯ ಚರಣಗಳಲ್ಲಿ ಅಕ್ಷತೆಯನ್ನು ಅರ್ಪಿಸಬೇಕು.

ಓಂ ಅನನ್ತಾಯ ನಮಃ । ಅನನ್ತಮ್ ಆವಾಹಯಾಮಿ ।।
ಓಂ ವಾಸುಕಯೇ ನಮ: । ವಾಸುಕಿಮ್ ಆವಾಹಯಾಮಿ ।।
ಓಂ ಶೇಷಾಯ ನಮ: । ಶೇಷಮ್ ಆವಾಹಯಾಮಿ ।।
ಓಂ ಶಙ್ಖಾಯ ನಮ: । ಶಙ್ಖಮ್ ಆವಾಹಯಾಮಿ ।।
ಓಂ ಪದ್ಮಾಯ ನಮ: । ಪದ್ಮಮ್ ಆವಾಹಯಾಮಿ ।।
ಓಂ ಕಮ್ಬಲಾಯ ನಮ: । ಕಮ್ಬಲಮ್ ಆವಾಹಯಾಮಿ ।।
ಓಂ ಕರ್ಕೋಟಕಾಯ ನಮ: । ಕರ್ಕೋಟಕಮ್ ಆವಾಹಯಾಮಿ ।।
ಓಂ ಅಶ್ವತರಯೇ ನಮ: । ಅಶ್ವತರಮ್ ಆವಾಹಯಾಮಿ ।।
ಓಂ ಧೃತರಾಷ್ಟ್ರಾಯ ನಮ: । ಧೃತರಾಷ್ಟ್ರಮ್ ಆವಾಹಯಾಮಿ ।।
ಓಂ ತಕ್ಷಕಾಯ ನಮ: । ತಕ್ಷಕಮ್ ಆವಾಹಯಾಮಿ ।।
ಓಂ ಕಾಲಿಯಾಯ ನಮ: । ಕಾಲಿಯಮ್ ಆವಾಹಯಾಮಿ ।।
ಓಂ ಕಪಿಲಾಯ ನಮ: । ಕಪಿಲಮ್ ಆವಾಹಯಾಮಿ ।।
ಓಂ ನಾಗಪತ್ನೀಭ್ಯೋ ನಮಃ । ನಾಗಪತ್ನೀಃ ಆವಾಹಯಾಮಿ ।।

ಓಂ ಅನನ್ತಾದಿನಾಗದೇವತಾಭ್ಯೋ ನಮ: । ಧ್ಯಾಯಾಮಿ ।
(ಅನಂತಾದಿ ನಾಗದೇವತೆಗಳನ್ನು ನಮಿಸಿ ನಾನು ಧ್ಯಾನ ಮಾಡುತ್ತೇನೆ)

೧. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆವಾಹಯಾಮಿ ।

೨. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಚಿತ್ರಕ್ಕೆ ಅಕ್ಷತೆಗಳನ್ನು ಅರ್ಪಿಸಬೇಕು)

೩. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪಾದ್ಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೪. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಅರ್ಘ್ಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೫. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಆಚಮನೀಯಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೬. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಸ್ನಾನಂ ಸಮರ್ಪಯಾಮಿ ।
(ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು)

೭. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ವಸ್ತ್ರಂ ಸಮರ್ಪಯಾಮಿ ।
(ವಸ್ತ್ರ ಅರ್ಪಿಸಬೇಕು)

೮. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಉಪವೀತಂ ಸಮರ್ಪಯಾಮಿ ।
(ಯಜ್ಞೋಪವೀತ ಅಥವಾ ಅಕ್ಷತೆಗಳನ್ನು ಅರ್ಪಿಸಬೇಕು)

೯. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಚನ್ದನಂ ಸಮರ್ಪಯಾಮಿ ।
(ಅನಂತಾದಿ ನವನಾಗಗಳಿಗೆ ಹೂವು-ಗಂಧ ಅರ್ಪಿಸಬೇಕು)

೧೦. ನಾಗಪತ್ನೀಭ್ಯೋನಮಃ । ಹರಿದ್ರಾಂ ಸಮರ್ಪಯಾಮಿ ।
(ನಾಗಪತ್ನಿಯರಿಗೆ ಅರಿಶಿನವನ್ನು ಅರ್ಪಿಸಬೇಕು)

೧೧. ನಾಗಪತ್ನೀಭ್ಯೋನಮಃ । ಕುಙ್ಕುಮಂ ಸಮರ್ಪಯಾಮಿ ।
(ನಾಗಪತ್ನಿಯರಿಗೆ ಕುಂಕುಮವನ್ನು ಅರ್ಪಿಸಬೇಕು)

೧೨. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಅಲಙ್ಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಅಕ್ಷತೆಗಳನ್ನು ಅರ್ಪಿಸಬೇಕು)

೧೩. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪೂಜಾರ್ಥೇ ಋತುಕಾಲೋದ್ಭವಪುಷ್ಪಾಣಿ ತುಲಸೀಪತ್ರಾಣಿ ಬಿಲ್ವಪತ್ರಾಣಿ ದೂರ್ವಾಙ್ಕುರಾಂಶ್ಚ ಸಮರ್ಪಯಾಮಿ।
(ಹೂವು, ಹಾರ, ಬಿಲ್ವಪತ್ರೆ ಇತ್ಯಾದಿ ಅರ್ಪಿಸಬೇಕು)

೧೪. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಧೂಪಂ ಸಮರ್ಪಯಾಮಿ ।
(ಊದುಬತ್ತಿಯಿಂದ ಬೆಳಗಬೇಕು)

೧೫. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ದೀಪಂ ಸಮರ್ಪಯಾಮಿ ।
(ನೀರಾಜನದಿಂದ ಆರತಿ ಬೆಳಗಬೇಕು)

೧೬. ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನೈವೇದ್ಯಾರ್ಥೇ ಪುರತಸ್ಥಾಪಿತ ನೈವೇದ್ಯಂ ನಿವೇದಯಾಮಿ ।
(ಹಾಲು-ಸಕ್ಕರೆ, ಕುಲಪರಂಪರೆಗನುಸಾರ ಪಾಯಸ ಇತ್ಯಾದಿಗಳ ನೈವೇದ್ಯ ಅರ್ಪಿಸಬೇಕು)

ಬಲಗೈಯಲ್ಲಿ ೨ ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ಎಲೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು. ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಥವಾ ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಬಲಗೈಯನ್ನು ನೈವೇದ್ಯದಿಂದ ನಾಗಗಳ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತ ಮುಂದಿನ ಮಂತ್ರವನ್ನು ಪಠಿಸಬೇಕು.

ಪ್ರಾಣಾಯ ಸ್ವಾಹಾ ।
ಅಪಾನಾಯ ಸ್ವಾಹಾ ।
ವ್ಯಾನಾಯ ಸ್ವಾಹಾ ।
ಉದಾನಾಯ ಸ್ವಾಹಾ ।
ಸಮಾನಾಯ ಸ್ವಾಹಾ ।
ಬ್ರಹ್ಮಣೇ ಸ್ವಾಹಾ ।

  ಸೂರ್ಯ ಅಷ್ಟೋತ್ತರ ಶತನಾಮಾವಳಿ

ಕೈಯಲ್ಲಿರುವ ಒಂದು ಎಲೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ಎಲೆಯನ್ನು ನಾಗದೇವತೆಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರದ ‘ಸಮರ್ಪಯಾಮಿ’ ಎಂದು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನೈವೇದ್ಯಂ ಸಮರ್ಪಯಾಮಿ ।

ಮಧ್ಯೇ ಪಾನೀಯಂ ಸಮರ್ಪಯಾಮಿ ।

ಉತ್ತರಾಪೋಶನಂ ಸಮರ್ಪಯಾಮಿ ।

ಹಸ್ತಪ್ರಕ್ಷಾಲನಂ ಸಮರ್ಪಯಾಮಿ ।

ಮುಖಪ್ರಕ್ಷಾಲನಂ ಸಮರ್ಪಯಾಮಿ ।

ಕರೋದ್ವರ್ತನಾರ್ಥೇ ಚನ್ದನಂ ಸಮರ್ಪಯಾಮಿ ।

ಮುಖವಾಸಾರ್ಥೇ ಪೂಗೀಫಲತಾಮ್ಬೂಲಂ ಸಮರ್ಪಯಾಮಿ ।

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಮಙ್ಗಲಾರ್ತಿಕ್ಯದೀಪಂ ಸಮರ್ಪಯಾಮಿ ।

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಕರ್ಪೂರದೀಪಂ ಸಮರ್ಪಯಾಮಿ ।
(ಕರ್ಪೂರದ ಆರತಿಯನ್ನು ಬೆಳಗಬೇಕು)

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ನಮಸ್ಕಾರಾನ್ ಸಮರ್ಪಯಾಮಿ ।
(ಸಾಷ್ಟಾಂಗ ನಮಸ್ಕಾರ ಹಾಕಬೇಕು)

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪ್ರದಕ್ಷಿಣಾಂ ಸಮರ್ಪಯಾಮಿ ।
(ಎದೆಯ ಬಳಿ ಎರಡೂ ಕೈಗಳನ್ನು ನಮಸ್ಕಾರದ ಮುದ್ರೆಯಲ್ಲಿ ಜೋಡಿಸಬೇಕು ಮತ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಮ್ಮ ಸುತ್ತಲೂ ಗೋಲಾಕಾರವಾಗಿ ತಿರುಗಿ ಪ್ರದಕ್ಷಿಣೆ ಹಾಕಬೇಕು.)

ಶ್ರಾವಣೇ ಶುಕ್ಲಪಞ್ಚಮ್ಯಾಂ ಯತ್ಕೃತಂ ನಾಗಪೂಜನಮ್ ।
ತೇನ ತೃಪ್ಯನ್ತು ಮೇ ನಾಗಾ ಭವನ್ತು ಸುಖದಾಃ ಸದಾ ।।

ಅಜ್ಞಾನಾಜ್ಜ್ಞಾನತೋ ವಾಽಪಿ ಯನ್ಮಯಾ ಪೂಜನಂ ಕೃತಮ್ ।
ನ್ಯೂನಾತಿರಿಕ್ತಂ ತತ್ಸರ್ವಂ ಭೋ ನಾಗಾಃ ಕ್ಷನ್ತುಮರ್ಹಥ ।।

ಯುಷ್ಮತ್ಪ್ರಸಾದಾತ್ಸಫಲಾ ಮಮ ಸನ್ತು ಮನೋರಥಾಃ ।
ಸರ್ವದಾ ಮತ್ಕುಲೇ ಮಾಸ್ತು ಭಯಂ ಸರ್ಪವಿಷೋದ್ಭವಮ್ ।।

ಅರ್ಥ : ಶ್ರಾವಣ ಶುಕ್ಲ ಪಕ್ಷ ಪಂಚಮಿಯಂದು ನಾನು ಮಾಡಿರುವ ಈ ನಾಗಪೂಜೆಯಿಂದ ನಾಗದೇವತೆಗಳು ಪ್ರಸನ್ನಾರಾಗಿ ನನಗೆ ಸದಾಕಾಲ ಸುಖವನ್ನು ಪ್ರದಾನಿಸುವಂತವರಾಗಲಿ. ಹೇ ನಾಗದೇವತೆಗಳೇ, ನಾನು ಮಾಡಿರುವ ಈ ಪೂಜೆಯಲ್ಲಿ ತಿಳಿದೋ ತಿಳಿಯದೆಯೋ ಏನಾದರೂ ಹೆಚ್ಚು-ಕಡಿಮೆ ಆಗಿದ್ದಲ್ಲಿ ನನ್ನನ್ನು ಕ್ಷಮಿಸಿ. ನಿಮ್ಮ ಕೃಪೆಯಿಂದ ನನ್ನ ಸರ್ವ ಇಚ್ಛೆ ಮನೋಕಾಮನೆಗಳು ಪೂರ್ಣವಾಗಲಿ. ನನ್ನ ಕುಲದಲ್ಲಿ ಎಂದಿಗೂ ಸರ್ಪವಿಷದ ಭಯ ಉತ್ಪನ್ನವಾಗದಿರಲಿ ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ..

ಓಂ ಅನನ್ತಾದಿನಾಗದೇವತಾಭ್ಯೋ ನಮಃ । ಪ್ರಾರ್ಥನಾಂ ಸಮರ್ಪಯಾಮಿ ।
(ಕೈ ಜೋಡಿಸಿ ಪ್ರಾರ್ಥನೆ ಮಾಡಬೇಕು)

ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ ।
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ।।

ಮನ್ತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ।।

ಅರ್ಥ : ಭಗವಂತಾ, ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆಯನ್ನು ಮಾಡುವಾಗ ಏನಾದರೂ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನನಾಗಿದ್ದೇನೆ. ನಾನು ಮಾಡಿದ ಪೂಜೆಯನ್ನು, ನೀನು ಪರಿಪೂರ್ಣವಾಗಿಸಿಕೋ. ಹಗಲು ರಾತ್ರಿ ನನ್ನಿಂದ ತಿಳಿದೋ ಅಥವಾ ತಿಳಿಯದೆಯೋ ಸಹಸ್ರಾರು ಅಪರಾಧಗಳಾಗುತ್ತಿರುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಾವಿಸಿ ನನ್ನನ್ನು ಕ್ಷಮಿಸು.

ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯೇ ತತ್ ।।

ಅರ್ಥ : ಹೇ ನಾರಾಯಣಾ, ಶರೀರ, ವಾಣಿ, ಮನಸ್ಸು, ಇತರ ಇಂದ್ರಿಯಗಳು, ಬುದ್ಧಿ, ಆತ್ಮ ಅಥವಾ ಪ್ರಕೃತಿ ಸ್ವಭಾವಕ್ಕನುಗುಣವಾಗಿ ನಾನು ಏನೇನು ಮಾಡಿದ್ದೇನೆಯೋ, ಅವೆಲ್ಲವನ್ನೂ ನಿಮಗೆ ಅರ್ಪಿಸುತ್ತೇನೆ.

ಅನೇನ ಕೃತಪೂಜನೇನ ಅನನ್ತಾದಿನವನಾಗದೇವತಾ: ಪ್ರೀಯನ್ತಾಮ್ ।

(ಹೀಗೆ ಹೇಳಿ ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು ಮತ್ತು ಎರಡು ಸಲ ಆಚಮನ ಮಾಡಬೇಕು,)

ಸಂಜೆ ವಿಸರ್ಜನೆಯ ಸಮಯದಲ್ಲಿ ಮುಂದಿನ ಶ್ಲೋಕವನ್ನು ಹೇಳಿ ನಾಗದೇವತೆಗಳ ಚರಣಗಳಲ್ಲಿ ಅಕ್ಷತೆಯನ್ನು ಅರ್ಪಿಸಿ ವಿಸರ್ಜನೆ ಮಾಡಬೇಕು.

ಯಾನ್ತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥಿವಾತ್ ।
ಇಷ್ಟಕಾಮಪ್ರಸಿದ್ಧ್ಯರ್ಥಂ ಪುನರಾಗಮನಾಯ ಚ ।।

ಈ ಪೂಜೆಯನ್ನು ಎಲ್ಲ ದೇವಗಣರು ಸ್ವೀಕರಿಸಲಿ ಮತ್ತು ಇಚ್ಛಿತ ಕಾರ್ಯದ ಸಿದ್ಧಿಗಾಗಿ ಮತ್ತು ಪುನಃ ಬರಲು ಈಗ ಪ್ರಸ್ಥಾನ ಮಾಡಲಿ.

ಇಲ್ಲಿಗೆ ನಾಗದೇವತೆಯ ಪೂಜೆ ಸಮಾಪ್ತವಾಯಿತು.

Leave a Reply

Your email address will not be published. Required fields are marked *

Translate »