ನಾರಾಯಣ ಸುಪ್ರಭಾತ

ಏಳು ನಾರಾಯಣನೆ…
ಏಳು ಲಕ್ಷ್ಮೀರಮಣ…ಏಳು ಕಮಲಾಕ್ಷ
ಕಮಲನಾಭಾ….
ಏಳಯ್ಯಾ ಬೆಳಗಾಯಿತು…
ಏಳಯ್ಯಾ ಬೆಳಗಾಯಿತು….

ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿ ಒಡೆಯ ವೆಂಕಟೇಶ
               ‌ ‌‌‌‌        ||ಏಳು ನಾರಾಯಣನೆ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು
ಸಮುದ್ರ ಮಥನವ ಮಾಡು||ಶೇಷ||
ದೇಶ ಕೆಂಪಾಯಿತು ಏಳಯ್ಯ ಹರಿಯೇ
                         ||ಏಳು ನಾರಾಯಣ||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದಾ
ಅರವಿಂದನಾಭಾ….ಆ…
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ||2||
ಹಿರಿದಾಗಿ ಕೋಳಿ ಕೂಗಿತು ಏಳೋ ಹರಿಯೇ
                         ||ಏಳು ನಾರಾಯಣ||

  ಪೂರ್ವ ಜನ್ಮದ ಸುಕೃತಗಳು

ದಾಸರೆಲ್ಲರು ಬಂದು ಧೂಳಿ ದರುಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು||2||
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀಹರಿಯೇ…..
                          ||ಏಳು ನಾರಾಯಣ||

Leave a Reply

Your email address will not be published. Required fields are marked *

Translate »