ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹೇಶ ನವಮಿ ಮಹತ್ವ ಪೂಜಾ ವಿಧಾನ ಹಿನ್ನೆಲೆ

ಮಹೇಶ ನವಮಿ …! ‌ ‌ ‌
ಭಾರತದೆಲ್ಲೆಡೆ ಅಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಮಹೇಶ ನವಮಿ ಕೂಡ ಒಂದು ವಿಶೇಷ ಹಬ್ಬವಾಗಿದೆ. ಇದು ಶಿವನನ್ನು ಒಲಿಸಿಕೊಳ್ಳಲು ಮಾಡುವ ಪೂಜೆಯಾಗಿದೆ.

ಮಹೇಶ ನವಮಿ ಎಂಬುದು ಶಿವನಿಗೆ ಅರ್ಪಿತವಾದ ದಿನವಾಗಿದೆ. ಇದು ಮಹೇಶ್ವರಿ ಸಮುದಾಯದ ಒಂದು ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಮಹೇಶ ನವಮಿಯನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಶಿವನ ಭಕ್ತರು ಈ ಹಬ್ಬವನ್ನು ತುಂಬಾನೇ ಸಡಗರ ಹಾಗೂ ಸಂತೋಷದಿಂದ ಆಚರಿಸುತ್ತಾರೆ.

ಶಿವನನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳಲ್ಲಿ ಮಹೇಶ ಎನ್ನುವ ಪದವೂ ಕೂಡ ಒಂದು. ಇದು ಶಿವನ ಕುರಿತು ಆಳವಾದ ಭಕ್ತಿಯನ್ನು ಸೂಚಿಸುತ್ತದೆ. ಶಿವನನ್ನು ಆಚರಿಸುವುದರಿಂದ ಕೋಪ, ತಾಪಗಳು ನಿಯಂತ್ರಣಕ್ಕೆ ಬರುತ್ತದೆ. ಅಷ್ಟು ಮಾತ್ರವಲ್ಲ, ಶಿವನನ್ನು ಪೂಜಿಸುವವರು ಬಹಳಷ್ಟು ಶ್ರದ್ಧೆಯಿಂದ ಪೂಜಿಸಬೇಕು. ಅದರಲ್ಲೂ ಮಹೇಶ ನವಮಿಯಂದು ಶಿವನನ್ನು ಆರಾಧಿಸಿದರೆ ಶಿವನು ಸಂತಸಗೊಂಡು ನೀವು ಬೇಡಿದ ವರವನ್ನು ನೀಡುವನು.

ಮಹೇಶ ನವಮಿಯ ಮಹತ್ವ:
‌ ಈ ದಿನದಂದು ಶಿವನು ಭಕ್ತರ ಮುಂದೆ ಪ್ರತ್ಯಕ್ಷವಾಗುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ದೇಶದ ಹಲವೆಡೆ ಈ ದಿನದಂದು ಶಿವನನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ದಿನದಂದು ಕೇವಲ ಮಹೇಶ್ವರನನ್ನು ಅಂದರೆ ಶಿವನನ್ನು ಮಾತ್ರ ಪೂಜಿಸುವುದಿಲ್ಲ, ಈ ದಿನದಂದು ಶಿವನ ಪತ್ನಿಯಾದ ಪಾರ್ವತಿಯನ್ನು ಕೂಡ ಪೂಜಿಸಲಾಗುತ್ತದೆ.

ಮಹೇಶ ನವಮಿಯಂದು ಪರಶಿವನನ್ನು ಪೂಜಿಸಿದರೆ ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಕೂಡ ಲಾಭವಾಗುವುದೆನ್ನುವ ನಂಬಿಕೆ ಶಿವನ ಭಕ್ತರ ಮನಸ್ಸಿನಲ್ಲಿದೆ. ಅದರಲ್ಲೂ ಈ ಪೂಜೆ ಮಹೇಶ್ವರಿ ಸಮುದಾಯಕ್ಕೆ ಅತ್ಯಂತ ಶ್ರೇಷ್ಠವಾದ ಪೂಜೆಯಾಗಿದೆ. ಯಾಕೆಂದರೆ ಜ್ಯೇಷ್ಠ ತಿಂಗಳ ಶುಕ್ಲ ಪಕ್ಷದ ಒಂಭತ್ತನೇ ದಿನದಂದು ಮಹೇಶ್ವರಿ ಸಮುದಾಯವು ಅಸ್ಥಿತ್ವಕ್ಕೆ ಬಂತೆಂಬ ನಂಬಿಕೆಯಿದೆ. ಈ ದಿನದಂದು ಮದುವೆಯಾಗಿ ಮಕ್ಕಳಾಗದ ಮಹಿಳೆಯರು ಸಂತಾನಕ್ಕಾಗಿ ಮಹೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಹಾಗೂ ಶಿವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

ಮಹೇಶ ನವಮಿ ಪೂಜಾ ವಿಧಾನ

ಮಹೇಶ ನವಮಿಯ ಹಿನ್ನೆಲೆ:
ದಂತಕಥೆಗಳ ಪ್ರಕಾರ, ರಾಜ ಖಂಡೇಲ್‌ಸನ್‌ ಎಂಬಾತ ಪುತ್ರ ಪ್ರಾಪ್ತಿಗಾಗಿ ಶಿವನನ್ನು ಕಟ್ಟು ನಿಟ್ಟಿನಿಂದ ಪೂಜಿಸುತ್ತಾನೆ. ತದನಂತರ ಆತನ ಭಕ್ತಿಗೆ ಒಲಿದ ಶಿವನು ಆತನಿಗೆ ಸುಜನ್‌ಸೇನ್‌ ಎನ್ನುವ ಪುತ್ರವನ್ನು ವರದಾನವಾಗಿ ನೀಡುತ್ತಾನೆ ಅಂದಿನಿಂದ ಆ ದಿನವನ್ನು ಮಹೇಶ ನವಮಿ ಎಂದು ಆಚರಿಸಲಾಗುತ್ತದೆ.

  ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ

ಇನ್ನೊಂದು ಕಥೆಯು ಹೇಳುವ ಪ್ರಕಾರ ಒಮ್ಮೆ ಅನೇಕ ಬೇಟೆಗಾರರು ಋಷಿಮುನಿಗಳ ಆಶ್ರಮದ ಮೇಲೆ ದಾಳಿ ಮಾಡಿ ಧ್ಯಾನದಲ್ಲಿದ್ದ ಋಷಿಮುನಿಗಳಿಗೆ ಹಾನಿಯನ್ನುಂಟು ಮಾಡುತ್ತಾರೆ. ಬೇಟೆಗಾರರ ಈ ಕೃತ್ಯಕ್ಕೆ ಕೋಪಗೊಂಡ ಋಷಿಮುನಿಗಳು ಬೇಟೆಗಾರರೆಲ್ಲರೂ ಕಲ್ಲಾಗುವಂತೆ ಶಾಪವನ್ನು ನೀಡುತ್ತಾರೆ. ಕಲ್ಲಾದ ಬೇಟೆಗಾರರನ್ನು ಕಂಡು ಆತಂಕಗೊಂಡ ಅವರ ಪತ್ನಿಯರು ತಮ್ಮ ಪತಿಯನ್ನು ಪುನಃ ಪಡೆದುಕೊಳ್ಳಲು ಶಿವನನ್ನು ಧ್ಯಾನಿಸಿ, ಆತನ ಬಳಿ ತಮ್ಮ ಪತಿಗೆ ಮರು ಜೀವ ನೀಡುವಂತೆ ಬೇಡಿಕೊಳ್ಳುತ್ತಾರೆ.

ಬೇಟೆಗಾರರ ಪತ್ನಿಯರ ಪ್ರಾರ್ಥನೆಗೆ ಮೆಚ್ಚಿದ ಪರಶಿವನು ಪ್ರತ್ಯಕ್ಷನಾಗಿ ನಿಮ್ಮ ಪತಿಯರು ಬೇಟೆಯಾಡಿ ಹಿಂಸಿಸುವುದನ್ನು ನಿಲ್ಲಿಸಬೇಕು. ಈದರ ಹೊರತು ಬೇರೆ ಕರ್ತವ್ಯದಲ್ಲಿ ನಿರತರಾಗುವುದಾದರೆ ನಾನು ಅವರನ್ನು ಶಾಪದಿಂದ ಮುಕ್ತಗೊಳಿಸುತ್ತೇನೆಂದು ಷರತ್ತನ್ನು ಹಾಕುತ್ತಾನೆ. ಆಗ ಬೇಟೆಗಾರರ ಪತ್ನಿಯರು ಶಿವನ ಷರತ್ತಿಗೆ ಒಪ್ಪಿದ ನಂತರ ಅವರಿಗೆ ಮರುಜೀವವನ್ನು ನೀಡುತ್ತಾನೆ. ಅಂದಿನಿಂದ ಬೇಟೆಗಾರರು ಬೇಟೆಯಾಡುವುದನ್ನು ಬಿಟ್ಟು ಬೇರೆ ಕರ್ತವ್ಯದಲ್ಲಿ ನಿರತರಾಗುತ್ತಾರೆ ಹಾಗೂ ಅವರ ಸಮುದಾಯವನ್ನು ಮಹೇಶ್ವರಿ ಸಮುದಾಯವೆಂದು ಹೆಸರಿಸಲಾಗುತ್ತದೆ. ಹಾಗೂ ಅಂದಿನಿಂದಲೇ ಮಹೇಶ ನವಮಿಯು ಆಚರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಮಹೇಶ ನವಮಿಯ ಆಚರಣೆ:
ಮಹೇಶ ನವಮಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಭಾರತದ ವಿವಿಧ ಭಾಗಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಅದರಲ್ಲೂ ರಾಜಸ್ಥಾನದಲ್ಲಂತೂ ತುಂಬಾ ವಿಶೇಷವಾಗಿದೆ. ಈ ಮೇಲೆ ಹೇಳಿರುವಂತೆ ಈ ದಿನದಂದು ಶಿವನ ಭಕ್ತರು ಪರಶಿವನನ್ನು ಮತ್ತು ಪಾರ್ವತಿಯನ್ನು ಉತ್ಸಾಹದಿಂದ ಪೂಜಿಸುತ್ತಾರೆ.

ಮಹೇಶ ನವಮಿಯಂದು ಶಿವನ ಭಕ್ತರು ಮುಂಜಾನೆ ಬೇಗ ಎದ್ದು, ಶುದ್ಧರಾಗಿ ದೇವಾಲಯವನ್ನು ಹಾಗೂ ಮನೆಯಲ್ಲಿರುವ ಶಿವ, ಪಾರ್ವತಿ ಮೂರ್ತಿಯನ್ನು ಶುಚಿಗೊಳಿಸಿ ಹೂವಿನಿಂದ ಅಲಂಕರಿಸುತ್ತಾರೆ. ಇನ್ನು ನವ ವಧು-ವರರಿಗೆ ಈ ಹಬ್ಬ ವಿಶೇಷವಾಗಿರುತ್ತದೆ. ಅವರು ಈ ಹಬ್ಬವನ್ನು ಆಚರಿಸಿದರೆ ಅವರ ದಾಂಪತ್ಯ ಜೀವನ ಸುಖವಾಗಿರುತ್ತದೆ ಎನ್ನುವ ನಂಬಿಕೆಯಿದೆ.

ಈ ಹಬ್ಬದಂದು ರಾತ್ರಿಯಿಡಿ ಭಕ್ತರು ಶಿವನ ಮಂತ್ರವನ್ನು, ಸ್ತೋತ್ರವನ್ನು ಜಪಿಸುತ್ತಿರುತ್ತಾರೆ. ಇದಲ್ಲದೇ, ಶಿವ ಮತ್ತು ಪಾರ್ವತಿಯ ಫೋಟೋವನ್ನು ಕೂಡ ಮನೆಗೆ ಕೊಂಡುಕೊಂಡು ಹೋಗುತ್ತಾರೆ. ಶಿವನ ಪ್ರಾರ್ಥನೆಯೊಂದಿಗೆ ಭಕ್ತರ ನಿವಾಸಗಳಲ್ಲಿ ಯಾಗ, ಯಜ್ಞಾದಿಗಳನ್ನು, ರುದ್ರಾಭಿಷೇಕವನ್ನು ಕೂಡ ಮಾಡಲಾಗುತ್ತದೆ. ಪೂಜೆಯು ಮುಗಿದ ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

ಮಹೇಶ ನವಮಿಯನ್ನು ಭಕ್ತಿಯಿಂದ ಆಚರಿಸಿದರೆ ಆರೋಗ್ಯ, ಸಂಪತ್ತು, ಸಂಪತ್ತು, ಸಂತೋಷ ಹಾಗೂ ಶಿವನ ಆಶೀರ್ವಾದವು ನಮ್ಮದಾಗುತ್ತದೆ ಎನ್ನುವ ನಂಬಿಕೆಯಿದೆ. ಅದೇನೆ ಇರಲಿ ಈ ದಿನವು ಮಹೇಶ್ವರಿ ಸಮುದಾಯಕ್ಕೆ ಜಾತ್ರೆಯಂತಿರುತ್ತದೆ.

  ಶ್ರೀವಿಷ್ಣು ಸಹಸ್ರನಾಮದ ಮಹತ್ವ

‌🔯 ಆಧ್ಯಾತ್ಮಿಕ ವಿಚಾರ.📖🔯 ‌ ‌ ‌ ‌ ‌ ಮಹೇಶ ನವಮಿ: ಇಲ್ಲಿದೆ ಪಠಿಸಬೇಕಾದ ಮಂತ್ರಗಳು, ಪರಿಹಾರ ಕ್ರಮಗಳು ಮತ್ತು ದಾನಗಳು..!

ಮಹೇಶ ನವಮಿಯನ್ನು ಜ್ಯೇಷ್ಠ ಶುಕ್ಲ ಪಕ್ಷದ ನವಮಿ ದಿನಾಂಕದಂದು ಅಂದರೆ 2023 ರ ಮೇ 29 ರಂದು ಸೋಮವಾರದಂದು ಆಚರಿಸಲಾಗುತ್ತದೆ. ಭಗವಾನ್ ಶಿವ ಮತ್ತು ಪಾರ್ವತಿಗೆ ಸಮರ್ಪಿತವಾದ ಈ ನವಮಿಯು ಅಪಾರ ಸಂತೋಷ, ಸಂಪತ್ತು, ಅಖಂಡ ಸೌಭಾಗ್ಯ ಮತ್ತು ಸಂತೋಷವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.
ಮಹೇಶ ನವಮಿಯ ಮಂತ್ರಗಳು:

  • ಓಂ ಕ್ಷಂ ಮಂ ಔಂ ಅಂ
  • ನಮೋ ನೀಲಕಂಠಾಯ
  • ಪ್ರೌಂ ಹ್ರೀಂ ಠಃ
  • ಊರ್ಧ್ವ ಭೂ ಫಟ್‌
  • ಓಂ ನಮಃ ಶಿವಾಯ
  • ಓಂ ಮಹೇಶ್ವರಾಯ ನಮಃ
  • ಓಂ ಪಾರ್ವತೀಪತಯೇ ನಮಃ * ಓಂ ಹ್ರೀಂ ಹ್ರೌಂ ನಮಃ ಶಿವಾಯ
  • ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
    ಉರ್ವಾರೂಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌ ||

ಮಹೇಶ ನವಮಿಯ ದಿನದಂದು ಮೇಲಿನ ಯಾವುದೇ ಮಂತ್ರವನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ 108 ಬಾರಿ ಜಪಿಸಬೇಕು. ಪಠಣ ಮಾಡುವ ಮೊದಲು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ನಂತರ ಅವುಗಳ ಮೇಲೆ ನೀರು ನೀಡಬೇಕು. ಈ ಮಂತ್ರಗಳನ್ನು ಪಠಿಸುವ ಮೂಲಕ ನೀವು ಶಿವನನ್ನು ಮೆಚ್ಚಿಸಬಹುದು.

ಮಹೇಶ ನವಮಿಯ ಪರಿಹಾರಗಳು:
1. ಈ ದಿನ ಶಿವನನ್ನು ಪಾರಿಜಾತ ಹೂವುಗಳಿಂದ ಪೂಜಿಸಬೇಕು. ಇದು ಸಂಪತ್ತು ಮತ್ತು ಹಣವನ್ನು ಹೆಚ್ಚಿಸುತ್ತದೆ.

  1. ಮಹೇಶ ನವಮಿಯ ದಿನದಂದು, ಶಿವಲಿಂಗ ಮತ್ತು ಶಿವನ ಪರಿವಾರದ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಜಲಾಭಿಷೇಕ ಮಾಡುವುದರಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ.
  2. ಈ ದಿನ ಶಿವನಿಗೆ ಧಾತುರವನ್ನು ಅರ್ಪಿಸುವುದರಿಂದ ಅದೃಷ್ಟ ಮತ್ತು ಸಂಪತ್ತು ಬರುತ್ತದೆ.
  3. ಈ ದಿನ 21 ಬಿಲ್ವಪತ್ರೆಗಳ ಮೇಲೆ ಕೆಂಪು ಚಂದನದಿಂದ ‘ಓಂ’ ಎಂದು ಬರೆದು ಶಿವನಿಗೆ ಅರ್ಪಿಸಿ.
  4. ಈ ದಿನದಂದು ಶಿವಲಿಂಗದ ಮೇಲೆ ಪಂಚಾಮೃತವನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ.
  5. ಈ ದಿನ ಶಿವನಿಗೆ ಬಾಂಗ್ ಅನ್ನು ಅರ್ಪಿಸುವುದರಿಂದ ಆತನ ಅನುಗ್ರಹ ದೊರೆಯುತ್ತದೆ.
  6. ಹೂವುಗಳು, ಗಂಗಾಜಲ ಮತ್ತು ಬಿಲ್ವ ಪತ್ರೆಗಳು ಇತ್ಯಾದಿಗಳನ್ನು ಅರ್ಪಿಸಿ ಶಿವನನ್ನು ಪೂಜಿಸುವುದು ಅದೃಷ್ಟವನ್ನು ತರುತ್ತದೆ.
  7. ಈ ದಿನ ಶಿವನ ಜೊತೆಗೆ ಪಾರ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ಪಾರ್ವತಿಯನ್ನು ಪೂಜಿಸಿ, ಸ್ಮರಿಸುವುದರಿಂದ ಮನೆಯಲ್ಲಿ ವಿಶೇಷ ಕೃಪೆ ಉಳಿಯುತ್ತದೆ. ಡೋಲು ಬಾರಿಸುವ ಮೂಲಕ ಪೂಜೆಯನ್ನು ಮಾಡಬೇಕು
  8. ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಲು, ಶಿವಲಿಂಗಕ್ಕೆ ಹಸುವಿನ ಶುದ್ಧ ತುಪ್ಪದಿಂದ ಅಭಿಷೇಕ ಮಾಡಬೇಕು.
  9. ನೀವು ಯಾವುದೇ ಗಂಭೀರ ಕಾಯಿಲೆಯಿಂದ ತೊಂದರೆಗೊಳಗಾಗಿದ್ದರೆ, ನಂತರ ರುದ್ರ ಯಂತ್ರವನ್ನು ಸ್ಥಾಪಿಸಿ ಮತ್ತು ಅದನ್ನು ಪೂಜಿಸಿದ ನಂತರ, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.
  ಮಾಘ ನವರಾತ್ರಿ ಅಥವಾ ಶ್ಯಾಮಲಾ ನವರಾತ್ರಿ ‌ ‌‌‌‌‌‌‌‌‌‌ವಿವರ ‌ ‌ ‌ ‌ ‌

ಮಹೇಶ ನವಮಿಯ ದಾನಗಳು:
1. ಈ ದಿನ ಹೆಣ್ಣು ಮಕ್ಕಳಿಗೆ ಖೀರು ತಿನ್ನಿಸಿ.

  1. ನೀರು, ಆಹಾರ, ಹಣ್ಣುಗಳು, ಬಟ್ಟೆ, ಪೂಜೆಯ ವಸ್ತುಗಳು ಮತ್ತು ಸಿಹಿತಿಂಡಿಗಳು, ತುಪ್ಪ, ಉಪ್ಪು, ಎಣ್ಣೆ, ಸಕ್ಕರೆ ಮತ್ತು ಚಿನ್ನ ಇವುಗಳನ್ನು ದಾನ ಮಾಡಿ.

ಮಹೇಶ ನವಮಿಯು ಭಗವಾನ್‌ ಶಿವನಿಗೆ ಅರ್ಪಿತವಾದ ಹಬ್ಬವಾಗಿದ್ದು, ಈ ದಿನ ಶಿವನೊಂದಿಗೆ ಶಿವ ಕುಟುಂಬವನ್ನು ಕೂಡ ಪೂಜಿಸಲಾಗುತ್ತದೆ. ಮಹೇಶ ನವಮಿಯಂದು ಈ ಮೇಲಿನ ಮಂತ್ರಗಳನ್ನು ಪಠಿಸುವುದರಿಂದ, ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮತ್ತು ದಾನವನ್ನು ಮಾಡುವುದರಿಂದ ವಿಶೇಷ ಲಾಭಗಳಿವೆ.

ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

Translate »