ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹೆಂಡತಿಯ ಗುಲಾಮ

ಎಷ್ಟು ಜನ ಹೆಂಡತಿಯ ಗುಲಾಮರಿದ್ದಾರೆ ?

ಒಬ್ಬ ರಾಜ ಇದ್ದ ಆತನಿಗೆ ಒಂದು ಸಮಸ್ಸೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಾಯಿತು “ನಮ್ಮ ರಾಜ್ಯದಲ್ಲಿ ಎಷ್ಟು ಜನ ಹೆಂಡತಿಯ ಗುಲಾಮರಿದ್ದಾರೆ” ಎಂದು ತಿಳಿದುಕೊಳ್ಳುವ ಬಗ್ಗೆ ಒಂದು ಪಂದ್ಯ ಇಟ್ಟ.

ರಾಜ ಸಭಾಂಗಣದ ಒಂದು ಕಡೆ ಸೇಬು ಹಣ್ಣುಗಳನ್ನು ಮತ್ತು ಒಂದು ಕಡೆ ಕುದುರೆಗಳನ್ನು ಕಟ್ಟಿದ. ಯಾರು ಹೆಂಡತಿಯ ಗುಲಮರೋ ಅವರು ಸೇಬು ತೆಗೆದುಕೊಳ್ಳಿ ಯಾರು ಸ್ವತಃ ನಿರ್ದಾರ ತೆಗೆದುಕೊಳ್ಳುವಿರೋ ಅವರು ತಮಗಿಷ್ಟವಾದ ಕುದುರೆ ತೆಗೆದುಕೊಳ್ಳಿ ಎಂದ.
ಜನಗಳೆಲ್ಲ ಬಂದ್ರು ಎಲ್ಲರೂ ಸೇಬು ಹಣ್ಣನ್ನೇ ತೆಗೆದುಕೊಂಡು ಹೋದರೆ ಹೊರತು ಕುದುರೆಯ ಹತ್ತಿರ ಯಾರೂ ಹೋಗಲೇ ಇಲ್ಲ .
ರಾಜಾ ಚಿಂತ್ರಿತನಾದ , ಒಬ್ಬರೂ ಹೆಂಡತಿಯ ಮಾತು ಕೇಳದೆ ಇರುವವರು ಇಲ್ಲವೇ ನನ್ನ ರಾಜ್ಯದಲ್ಲಿ ಎಂದು.
ಅಷ್ಟರಲ್ಲಿ ಒಬ್ಬ ಮಹಾ ಬಲಶಾಲಿ ವ್ಯಕ್ತಿ ಬಂದ ನೋಡಲು ಆಳೆತ್ತರ ವ್ಯಾಘ್ರ ಲಕ್ಷಣದ ಮುಖದವನು ಅವನು ಬಂದವನೇ ಕುದುರೆಯನ್ನು ತೆಗೆದುಕೊಳ್ಳಲು ಹೋದ .ಆಗ ರಾಜ “ಹೇ ಗಂಡುಗಲಿ ನಿನಗೆ ಯಾವ ಕುದುರೆ ಬೇಕೋ ಆ ಕುದುರೆಯನ್ನು ತೆಗೆದುಕೊಂಡು ಹೋಗು” ಎಂದ .
ಆತ ಕಪ್ಪು ಬಣ್ಣದ ಬಲಿಷ್ಠ ಕುದುರೆಯನ್ನು ತೆಗೆದು ಕೊಂಡು ಹೋದ .
ಮತ್ತೆ ಕಾರ್ಯಕ್ರಮ ಸಂಜೆಯತನಕ ನಡೆಯಿತು ಆದ್ರೆ ಮತ್ತೊಬ್ಬ ಯಾರೂ ಕುದುರೆಯನ್ನು ತೆಗೆದುಕೊಳ್ಳಲು ಬರಲೇಯಿಲ್ಲ …ಸಂಜೆ ಹೊತ್ತಿಗೆ ಇನ್ನೇನು ಪಂದ್ಯ ಮುಕ್ತಾಯವಾಗುವ ಹೊತ್ತಿನಲ್ಲಿ ಆ ಬಲಶಾಲಿ ವ್ಯಕ್ತಿ ಕುದುರೆಯನ್ನು ವಾಪಸ್ ತೆಗೆದುಕೊಂಡು ಬಂದ .
ರಾಜ ಕೇಳಿದ “ಏಕೆ ನಿನಗೆ ಇನ್ನೊಂದು ಕುದುರೆ ಬೇಕಾ ವೀರ?”

  ಆಗುವುದೆಲ್ಲಾ ಒಳ್ಳೆಯದಕ್ಕೇ - ಒಂದು ಸಣ್ಣ ಕಥೆ

ಅದಕ್ಕೆ ಆ ಬಲಶಾಲಿ ವ್ಯಕ್ತಿ ಹೇಳಿದ ” ಇಲ್ಲ ಮಹಾಪ್ರಭು ನನ್ನ ಹೆಂಡತಿ ಈ ಕಪ್ಪು ಕುದುರೆ ಬೇಡ ಅಂದ್ಲು ಕಪ್ಪು ಬಣ್ಣ ಅಶುಭ ಅಂತೆ ಬಿಳಿಯ ಕುದುರೆ ಒಯ್ಯಲು ಬಂದಿದ್ದೇನೆ”😊 ಎಂದ.

ರಾಜನಿಗೆ ಕೋಪ ಬಂತು ” ಅಮಿಕ್ಕಂಡ್ ಆಪಲ್ ತಗೊಂಡ್ ಹೊಗ್ಲಾ ಬಡವ ರಾಸ್ಕಲ್ “😡 ಎಂದ.

ಅಂದಿನ ಸಭೆ ಮುಗಿಯಿತು .ಮದ್ಯರಾತ್ರಿ ಮಹಾಮಂತ್ರಿ ರಾಜನ ಕೋಣೆಯ ಬಾಗಿಲು ತಟ್ಟಿದ ಮಹಾರಾಜ ಕೇಳಿದ ಏನಾಯ್ತು?

ಮಹಾಮಂತ್ರಿ- ಮಹಾರಾಜಾ ನಾವು ಕುದುರೆ ಬದಲು ವಜ್ರ ವೈಡೂರ್ಯ ಏನಾದ್ರು ಇಟ್ಟಿದ್ರೆ ಯಾರಾದ್ರೂ ಒಯ್ಯೊಕೆ ಬರ್ತಿದ್ರೋ ಏನೋ ಅಲ್ಲವೇ?

  ಆರು ಕನ್ನಡ ಸಣ್ಣ ಕಥೆಗಳು - 6 small kannada stories

ಮಹಾರಾಜ- ನಾನೂ ಅದನ್ನೇ ಇಡಬೇಕು ಅಂತ ಮಾಡಿದ್ದೆ ಆದ್ರೆ ಇವ್ಳು ಬ್ಯಾಡ ಅಂದ್ಬಿಟ್ಲು.

ಮಹಾಮಂತ್ರಿ:-ಹೌದಾ ಹಾಗಾದ್ರೆ ನಿಮಗೂ ಸೇಬು ಕೊಡಬೇಕು ಅನ್ನಿ😃

ಮಹಾರಾಜ- (ನಗುತ್ತಾ) ಅದೇನೋ ಸರಿ ನೀವು ಇಷ್ಟೋತ್ತಲ್ಲಿ ಯಾಕ್ ಕೇಳೋಕೆ ಬಂದ್ರಿ ಹಗಲೊತ್ತೆ ಕೆಲಬುದಿತ್ತಲ್ವಾ ?

ಮಹಾಮಂತ್ರಿ:- actually ಈ ಪ್ರಶ್ನೆ ನನಗೆ ಹೊಳೆದಿದ್ದಲ್ಲ ನನ್ ಹೆಂಡ್ತಿ ಹೇಳಿದ್ಳು ಇವಾಗ್ಲೇ ಹೋಗಿ ಕೇಳ್ಕೊಂಡ್ ಬನ್ನಿ ಅಂತ .

ಮಹಾರಾಜ – ಹಾಗಾದ್ರೆ ಒಂದು ಲೋಡ್ ಸೇಬು ಲಾರಿಯನ್ನೇ ಕಳಿಸಬೇಕು ಬಿಡಿ ನಿಮ್ಗೆ😃😃

  ಗಂಡ ಹೆಂಡತಿ - ಹಿರೇಮಗಳೂರು ಕಣ್ಣನ್

Moral of the story…

ನಮ್ಮದು ಪುರುಷ ಸಮಾಜವೇನೋ ನಿಜ ಆದ್ರೆ ಹೆಂಡತಿಯ ಮಾತು ಕೇಳದ ಪುರುಷನಿಲ್ಲ😜 ಅವಳ ಮಾತನ್ನು ಮೀರುವ ಗಂಡನಿಲ್ಲ.😛

ನಾನ್ ಆಗ್ಲೇ ಸೇಬು ತಗಂಡ ಬಂದೆ ನೀವು ಹೋಗಿ ತಗೊಂಡ್ ಬನ್ನಿ .
ಹಾಗೆ ಇನ್ನೊಂದು ಮಾತು.👇
.
..
.
..
.
.
.
.
.
..
.
.
.
.
.ಪುಗ್ಸಟ್ಟೆ ಪುರಾಣ ಮುಗಿತು ಎದ್ದೊಗಿ😜😛😝😜😛😝😜😛😝😝😜😛😝😛😜😝😛😜😛😛😝😛😜😛😜😛😝😛😜😛😝😛😜😛😝😜😛😛😜

Leave a Reply

Your email address will not be published. Required fields are marked *

Translate »