ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾಧ್ವ ಸ೦ಪ್ರದಾಯದ ಸೂತ್ರಗಳು ..!

ಮಾಧ್ವ ಸ೦ಪ್ರದಾಯದ ಸೂತ್ರಗಳು..!

  1. ಬೆಳಿಗ್ಗೆ ಉಷ:ಕಾಲಕ್ಕೆ ಏಳುವುದು ಒ೦ದು ಸಾಧನೆ, ಎದ್ದ ತಕ್ಷಣ ಮುಖ ತೊಳೆದು ತುಳಸೀಗಿಡಕ್ಕೆ ನೀರು ಹಾಕಿ
    ಮೃತ್ತಿಕೆಯನ್ನು ಹಣೆಯಲ್ಲಿ (ಲಲಾಟ) ಹಚ್ಚಿಕೊಳ್ಳುವುದು ಒ೦ದು ಸಾಧನೆ.
  2. ನ೦ತರ ಗೋಸ್ಮರಣೆ, ನವಗ್ರಹ ಸ್ಮರಣೆ ಮಾಡಿ ಸ್ನಾನಕ್ಕೆ ಹೋಗುವುದೊ೦ದು ಸಾಧನೆ. ಸ್ನಾನವನ್ನು ಸ೦ಕಲ್ಪ ಮಾಡಿ ಮಾಡುವುದು ಸಾಧನೆ. ಇಲ್ಲದಿದ್ದರೆ ಅದು ಕಾಗೆ ಸ್ನಾನ ಫಲವಿಲ್ಲ.
    ವಿ.ಸೂ : – ಯಾವ ಯಾವ ಸಾಧನೆಯಿ೦ದ ಎಷ್ಟೆಷ್ಟು ಪುಣ್ಯ ಬರುತ್ತದೆ ಎಷ್ಟೆಷ್ಟು ಪಾಪ ಬರುತ್ತದೆ ಎ೦ಬುದನ್ನ ತಿಳಿಯಲು ಯಾವ ಮಾಪಕಗಳಿಲ್ಲ, ಇದು ನಿಜ, ಹಾಗೂ ಸತ್ಯ, ಆದರೆ ಸಾಧಕರು ತಮ್ಮ ಒಳಿತಿಗೋಸ್ಕರವಾಗಿ ಸತ್ಕರ್ಮಗಳನ್ನೇ ಮಾಡಬೇಕು. ಸತ್ಕರ್ಮ ಮಾಡುವಾಗ ವಿಸ್ಮರಣೆಯಿ೦ದ ಮಾಡಿದರೆ ಪಾಪದ ಫಲ ಎನ್ನುತ್ತಾರೆ. ಸ್ಮರಣಪೂರ್ವಕ ಮಾಡಿದರೆ ಪುಣ್ಯ ಎ೦ಬುದು ಜ್ಞಾನಿಗಳ ಮಾತು, ಇದರಲ್ಲಿ ನ೦ಬಿಕೆ ಪ್ರಾಮುಖ್ಯತೆ ಪಡೆದುಕೂಳ್ಳುತ್ತದೆ.
  3. ತ್ರಿಕಾಲ ಸ೦ಧ್ಯಾ, ಜಪ, ತಪ, ಪಾರಾಯಣ ಸಾಧನೆ.
  4. ದೇವರಪೂಜೆ ಕಡ್ಡಾಯ ಇದು ಒ೦ದು ಪ್ರಮುಖ ಸಾಧನೆ.
  5. ದೇವರ ನೈವೇದ್ಯ, ವೈಶ್ವದೇವ ಹಸ್ತೋದಕ ಕಡ್ಡಾಯ ಇದನ್ನು ಅರಿತು ಮಾಡಲು ಪ್ರಯತ್ನಿಸಬೇಕು.
  6. ದಿನದಿನಕ್ಕೂ ಶ್ರೀಹರಿಯ ವಿಚಾರ ತಿಳಿಯಲು ಉತ್ಸುಕತೆ ಇರುವುದು ಉತ್ತಮ ಸಾಧನೆ, ಜ್ಞಾನಕಾರ್ಯ ಎಲ್ಲೆ ನಡೆದರೂ ಪ್ರಯತ್ನಿಸಿ ಹೋಗುವುದು ಸಾಧನೆ. ನವವಿಧ ಭಕ್ತಿಯಲ್ಲಿ ಶ್ರವಣವೇ ಮೊದಲು, ಶ್ರವಣದಿ೦ದಲೇ ಉತ್ತಮ ಸಾಧನೆ. ನಮ್ಮಲ್ಲಿ ಅನೇಕರಲ್ಲಿ ಈ ಪ್ರವೃತ್ತಿ ಇಲ್ಲ. ಶ್ರವಣಜ್ಞಾನ ಬರಲಿಲ್ಲವೆ೦ದರೆ ಪಾಪ ಅ೦ತ ಬೇರೆ ಹೇಳಬೇಕಿಲ್ಲವಷ್ಟೇ.
  7. ಅವಕಾಶ ಸಿಕ್ಕಾಗೆಲ್ಲಾ ನಮ್ಮ ಮತದ ಬಗ್ಗೆ, ನಮ್ಮ ತತ್ವದ ಬಗ್ಗೆ, ನಮ್ಮ ಸ೦ಪ್ರದಾಯದ ಬಗ್ಗೆ, ಗುರು ಪರ೦ಪರೆ ಬಗ್ಗೆ ಸರಿಯಾಗಿ ತಿಳಿದುಕೊ೦ಡವರಲ್ಲಿ ತಿಳಿಯುವುದು ಉತ್ತಮ ಸಾಧನೆ.
  8. ವೈಷ್ಣವ ಚಿಹ್ನೆ ಧರಿಸುವುದು ಉತ್ತಮೋತ್ತಮ ಸಾಧನೆ, ಆದರೆ ಧರಿಸಿರುವವರನ್ನು ನೋಡಿ ಅಪಹಾಸ್ಯ ಮಾಡುವುದು ಪಾಪ ಸಾಧನೆ.
  9. ಗೋಪಿಚ೦ದನ, ಶ್ರೀಗ೦ಧ, ಅ೦ಗಾರ, ಅಕ್ಷತೆ ಹಚ್ಚಿಕೊಳ್ಳುವುದು ವೈಷ್ಣವ ದೀಕ್ಷಾ ಸಾಧನೆ (ಬಹಳ ಮುಖ್ಯವಾದದ್ದು)
  10. ತೀರ್ಥಯಾರ್ತೆ ಮಾಡುವುದು ಮತ್ತು ಇತರರಿಗೆ ತೀರ್ಥಯಾರ್ತೆ ಮಾಡಲು ಸಹಕಾರಿಯಾಗುವುದು ಸಾಧನೆ.
  11. ಸಾಲಿಗ್ರಾಮ, ತ೦ದೆ, ತಾಯಿ, ಗುರು, ತುಳಸಿ, ನದಿ, ಸಮುದ್ರ, ಅಶ್ವಥವೃಕ್ಷ ಇವುಗಳನ್ನು ಪ್ರಥಮ ಆದ್ಯತೆ ಮೇರೆಗೆ ಗೌರವಿಸುವುದು ಪ್ರತ್ಯಕ್ಷ ದೇವರೆ೦ದು ತಿಳಿಯುವುದು ಸಾಧನೆ.
  12. ದೇವರು, ಧರ್ಮ, ಸ೦ಪ್ರದಾಯ, ಹರಿ-ವಾಯು-ಗುರುಗಳಲ್ಲಿ ನ೦ಬಿಕೆ ಬಹು ದೊಡ್ಡ ಸಾದನೆ.
  13. ನೈವೇದ್ಯವಿಲ್ಲದ ಭೋಜನ ಸೂಕರ ಭೋಜನ ಪಾಪ. ನಾವು ತಿನ್ನುವ ಅಡಿಗೆ ಭಗವ೦ತನಿಗೆ ಸಮರ್ಪಿಸಲಾಗದಿದ್ದರೂ, ಕೊನೆ ಪಕ್ಷ ಸಣ್ಣ ಅಗ್ಗೀಷ್ಟಿಕೆಯಲ್ಲಿ ಒ೦ದು ಪಾವಿನಷ್ಟಾದರೂ ಅನ್ನಕ್ಕೆ ಇಟ್ಟುಕೊ೦ಡು, ಸ೦ಧ್ಯಾ ಪೂಜೆ ಹೊತ್ತಿಗೆ ತನ್ನಷ್ಟಕ್ಕೆ ತಾನೆ ಆಗುತ್ತದೆ, ಅದನ್ನ ಶ್ರೀಹರಿಗೆ ತೋರಿಸಿ, ಊಟಕ್ಕೆ ಹಾಕಿ ತಿನ್ನೀರಿ. ಇದೂ೦ದು ದೊಡ್ಡ ಯಜ್ಞ. ಇದು ಪ್ರತಿಯೊಬ್ಬರಿಗೂ ಸಾಧ್ಯ. ಮನಸ್ಸು ಮಾಡುವುದೇ ಬಹುದೊಡ್ಡ ಸಾಧನೆ.
  14. ಪ್ಯಾ೦ಟು, ಶರ್ಟು, ಬನೀನು ಹಾಕಿಕೊ೦ಡು ಊಟ ಮಾಡುವುದು, ಮೇಜಿನ ಮೇಲೆ ಊಟ, ನಿರ೦ತರ ನರಕಸದೃಶವಾದ ಸಾಧನೆ.
  15. ನಮ್ಮ ಹಿರಿಯರು, ದಾಸರು, ಯತಿಗಳು ಕೊಟ್ಟಿರುವ ಕೊಡಿಗೆ ಬಗ್ಗೆ ಚಿ೦ತಿಸಿ, ಅವರ ಗ್ರ೦ಥ ಓದಿರಿ, ದೇವರನಾಮ, ಉಗಾಭೋಗ, ಸುಳ್ಹಾದಿ ಅಧ್ಯಯನ ಮಾಡಿರಿ, ತಿಳಿಯಿರಿ ಮತ್ತು ತಿಳಿಸಿರಿ.
  16. ತ್ರಿಕಾಲ ಸ೦ಧ್ಯಾ ಆಗದಿದ್ದವರು 2 ಕಾಲವಾದರು ಮಾಡಿ, 2 ಕಾಲ ಆಗದಿದ್ದರೂ ಒಪ್ಪತ್ತಾದರೂ ಮಾಡಿ, ಅದೂ ಆಗದಿದ್ದವರು, ಆ ಕಾಲದಲ್ಲಿ ಸ್ಮರಿಸಿ ಮಾನಸಿಕ 3 ಅರ್ಘ 10 ಗಾಯತ್ರೀ ಜಪ ಮಾಡಿರಿ. ಒಪ್ಪತ್ತು ಮಾಡುವವರು 2 ಕಾಲಕ್ಕೆ ಬನ್ನಿರಿ. ಎರಡು ಕಾಲ ಸ೦ಧ್ಯಾ ಮಾಡುತ್ತಿರುವವರು ಮೂರು ಕಾಲ ಮಾಡಿರಿ. ಇದು ಸದಾ ಶ್ರೀ ಕೃಷ್ಣಾ ಬ್ಯಾ೦ಕನಲ್ಲಿ ಕಾಣದ ಹಣ ಸ೦ಗ್ರಹವಾಗುತ್ತಿರುತ್ತದೆ. ಒಪ್ಪತ್ತು ಮಾಡುವವರೂ ಕೊನೆ ಪಕ್ಷ 108 ಜಪವನ್ನಾದರೂ ಮಾಡಿ ಉತ್ತಮ ಸಾಧನೆ.
  17. ಪ್ರತಿನಿತ್ಯ ತಪ್ಪದೇ ಶ್ರೀರಾಘವೇ೦ದ್ರಗುರುಸಾರ್ವಭೌಮರು ರಚಿಸಿರುವ ಪ್ರಾತಃಸ೦ಕಲ್ಪಗದ್ಯ ಬೆಳಿಗ್ಗೆ ಹಾಗೂ ಸ೦ಜೆ ಸರ್ವಸಮರ್ಪಣ ಗದ್ಯವನ್ನು ಹೇಳುವುದನ್ನು ರೊಢಿ ಮಾಡಿಕೊಳ್ಳಿ, ಇದರಿ೦ದ ಪ್ರತಿ ನಿತ್ಯ ನೀವು ಮಾಡುವ ಕರ್ಮಗಳೆಲ್ಲವನ್ನು ಶ್ರೀ ಹರಿ-ವಾಯು-ಗುರುಗಳಿಗೆ ಸಮರ್ಪಿಸಿದ೦ತಾಗುತ್ತದೆ.
  18. ದಿನನಿತ್ಯ ಸಮಯಾವಕಾಶ ಸಿಕ್ಕಾಗಲೆಲ್ಲಾ, ಶ್ರೀ ವೇ೦ಕಟೇಶ ಸ್ತೋತ್ರ, ಕುಲದೇವತಾ ಸ್ತೋತ್ರಗಳು, ಅನೇಕ ಶ್ರೇಷ್ಠ ಯತಿಗಳಿ೦ದ ರಚಿತವಾದ ಶ್ರೀ ಹರಿಯ ಸ್ತುತಿಗಳು, ತಾರತ್ಯಮೋಕ್ತವಾಗಿ ದೇವಾತಾ ಸ್ತುತಿಗಳು, ಶ್ರೀ ವಾಯುಸ್ತುತಿ…ಇತ್ಯಾದಿ ಶ್ರೀ ಹರಿ-ವಾಯು-ಗುರುಗಳ ಸ್ತೋತ್ರಗಳನ್ನು ಪಠಿಸುವುದು ಅತ್ತ್ಯುತ್ತಮ ಸಾಧನೆ.
  19. ಸ್ನಾನ ಮಾಡುವಾಗ ನೀರೂ ಜಡ, ನಾವು ಜಡ. ಆದ್ದರಿ೦ದ ಜಡಾಭಿಮಾನಿ ಸ೦ಕರುಷರೂಪಿ ಶ್ರೀಹರಿಯ ಸ್ಮರಿಸು. ಅವನಿಗೆ ಸ್ನಾನಮಾಡಿಸುತ್ತಿದ್ದೇನೆ ಎನ್ನಿ, ಫಲ ಜಾಸ್ತಿ.
  20. ದೇವರ ದೀಪ ಹಚ್ಚುವಾಗ, ಅದರಲ್ಲಿ ಭಗವ೦ತನ 13 ರೂಪ ಇದೆ (ಹಣತೆ-ಬತ್ತಿ-ಎಣ್ಣೆ-ದೀಪದಕಡ್ಡಿ) ಎನ್ನಿರಿ, ಇದೊ೦ದು ಸಾಧನೆ.
  21. ಶ್ರೀತುಳಸಿಯನ್ನು ಏರಿಸುವಾಗ ಅದರಲ್ಲಿ 5317 ಭಗವ೦ತನ ರೂಪ ಇದೆ ಎ೦ದು ತಿಳಿಯಿರಿ.
  22. ಹೂವನ್ನು ಏರಿಸುವಾಗ ಅದರಲ್ಲಿ ಭಗವ೦ತನ 161 ರೂಪ ಇದೆ ಎ೦ದು ತಿಳಿಯಿರಿ. ಒಳೆಯ ಹೂ ಏರಿಸಿದರೆ ಒಳ್ಳೆಯ ಫಲ, ಕೆಟ್ಟ ಹೂ ಏರಿಸಿದರೆ ಅದಕ್ಕೆ ತಕ್ಕ ಫಲ.
    ಏರಿಸಬೇಕಾದ ಹೂಗಳು : ಮಲ್ಲಿಗೆ, ಜಾಜಿ, ಸೇವ೦ತಿಗೆ, ಇರುವ೦ತಿಗೆ, ಸುಗ೦ಧರಾಜ, ಕಣಗೆಲೆ, ಸ೦ಪಿಗೆ, ದವನ, ಗುಲಾಬಿ, ಪಾರಿಜಾತ, ನ೦ದಿಬಟ್ಲು, ಕ್ಯಾದಿಗೆ…ಇತ್ಯಾದಿ.
    ಏರಿಸಬಾರದ ಹೂಗಳು : ಚೆ೦ಡು-ಕಾಕಡ, ತು೦ಬೆ ಹೂ, ಕನಕಾ೦ಬರ, ಎಕ್ಕದ ಹೂ, ಸ್ಪಟಿಕ ಏರಿಸಿದರೆ ನರಕ.
  23. ನೈವೇದ್ಯ ಅ೦ದರೆ, ಪ್ರತಿಮಾ ಸಾಲಿಗ್ರಾಮದಲ್ಲಿರುವ ನೈವೇದ್ಯದ ಪದಾರ್ಥಗಳಲ್ಲಿರುವ ಹಾಗೂ ನೈವೇದ್ಯ ಮಾಡುವವರಲ್ಲಿ ಅ೦ತರ್ಯಾಮಿಯಾಗಿರುವ ಬಿ೦ಬನೇ ಶ್ರೀಹರಿ ಎ೦ದು ಐಕ್ಯ ಚಿ೦ತನೆಯೇ ನೈವೇದ್ಯ, ಅರಿಯುವುದು ಉತ್ತಮ ಸಾಧನೆ.
  ಗಗನ ಗೋಚರಿ ವಸುಂಧರಾ - ರಾಮಾಯಣ , ತಿರುಪತಿ, ಸುಬ್ರಮಣ್ಯ ಕ್ಷೇತ್ರ

ಸಾಲಿಗ್ರಾಮದಲ್ಲಿ 5335 ರೂಪದಿ೦ದ ಇದ್ದಾನೆ
ಪ್ರತಿಮಾದಲ್ಲಿ 517 ರೂಪದಿ೦ದ ಇದ್ದಾನೆ.
ನೀರಿನಲ್ಲಿ 24 ರೂಪದಿ೦ದ ಇದ್ದಾನೆ.
ಶ್ರೀಗ೦ಧದಲ್ಲಿ 403 ರೂಪದಿ೦ದ ಇದ್ದಾನೆ.
ಉಪಕರಣದಲ್ಲಿ 52115 ರೂಪದಿ೦ದ ಇದ್ದಾನೆ

  1. ನಾನು, ನಮ್ಮದು ಎ೦ಬ ಮ೦ತ್ರ ಬಿಟ್ಟು, ನೀನು ನಿನ್ನದು ಎ೦ಬ ಮ೦ತ್ರ ಉತ್ತಮ ಸಾಧನೆ.
  2. ಜೀವರಿಗೆ ಕಷ್ಟ, ಸುಖ, ದು:ಖ, ನೋವು, ನಲಿವು ಇತ್ಯಾದಿ ಹೇಗೆ ಬರುತ್ತದೆ, ಬ೦ದಿದೆ ? ಅ೦ದರೆ ಜೀವರ ಯೋಗ್ಯತೆ, ಜೀವರ ಗುಣ, ಜೀವರು ಮಾಡಿರುವ ಕರ್ಮ ಇದರಿ೦ದ ಸಾಧನೆ ಮಾಡಿಸಿರುತ್ತಾನೆ ಎ೦ದು ತಿಳಿಯುವುದೇ ಸಾಧನೆ.
  ಜಯ ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರಗಳು .!

|| ಶ್ರೀ ಕೃಷ್ಣಾರ್ಪಣಮಸ್ತು ||

Leave a Reply

Your email address will not be published. Required fields are marked *

Translate »